ಶಿಕ್ಷಕ ದಂಪತಿಯ ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2023-08-09 16:24 GMT

ಉಡುಪಿ, ಆ.9: ಕುಂಜಿಬೆಟ್ಟು ಶಾಂಭವಿ ಬಿಲ್ಡಿಂಗ್‌ನ ಎಸ್‌ಆರ್‌ಎಸ್ ಸ್ಟಾಪ್ ಕ್ವಾರ್ಟರ್ಸ್‌ನಲ್ಲಿರುವ ಶಿಕ್ಷಕಿ ದಂಪತಿಯ ಮನೆಗೆ ಆ.8ರಂದು ಬೆಳಗ್ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಶಿಕ್ಷಕಿಯರಾದ ಗಂಗಾಧರ ಹಾಗೂ ದೀಪಾ ಎಂಬವರ ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ ಚಿನ್ನದ ಕರಿಮಣಿ ಸರ, ಮುತ್ತಿನ ಸರ, 2 ಚಿನ್ನದ ಸರ, 2 ಚಿನ್ನದ ಬಳೆ, 6 ಚಿನ್ನದ ಕಿವಿಯೋಲೆಗಳು, 2 ಚಿನ್ನದ ಉಂಗುರ, ಮಕ್ಕಳ 12 ಸಣ್ಣ ಉಂಗುರ ಸೇರಿದಂತೆ ಒಟ್ಟು 116 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 6,30,000ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News