ಹೊಸಪೇಟೆಯಲ್ಲಿ ಭಾರಿ ಮಳೆ; ಜನಜೀವನ ಅಸ್ತವ್ಯಸ್ತ

Update: 2024-08-17 08:26 GMT

ವಿಜಯನಗರ : ಹೊಸಪೇಟೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳ ಮನೆಗೆ ನೀರು ನುಗ್ಗಿದ ಕಾರಣ  ಜನ ಜೀವನ ಅಸ್ತವ್ಯಸ್ತವಾಗಿತ್ತು.

ಸ್ಥಳಕ್ಕೆ ಆಗಮಿಸಿದ್ದ ನಗರಸಭೆ ಪೌರ ಆಯುಕ್ತ ಚಂದ್ರಪ್ಪ ಮತ್ತು ನಗರ ಸಭೆ ಸದಸ್ಯೆ ಮುನ್ನಿ ಅವರನ್ನು  ತರಾಟೆಗೆ ತೆಗೆದುಕೊಂಡ ನಿವಾಸಿಗಳು ಮಳೆ ಬಂದರೆ ಇಡೀ ಮನೆಯೆಲ್ಲಾ ನೀರು ತುಂಬುತ್ತೆ.  4 ವರ್ಷಗಳಿಂದ ಹೇಳುತ್ತಿದ್ದರೂ ಯಾರೊಬ್ಬರೂ ಇತ್ತ ಕಡೆ ಗಮನ ಹರಿಸಲಿಲ್ಲ. ‌ ರಾತ್ರಿ ಇಡೀ ನಮ್ಮ ಮಕ್ಕಳನ್ನು ಗ್ಯಾಸ್ ಕಟ್ಟೆಯ ಮೇಲೆ ಮಲಗಿಸಿದ್ದೇವೆ ಇದನ್ನು ನೋಡಿ ಆದರೂ ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಿ ಎಂದರು.

ಶಾಸಕರಾದ ಎಚ್ ಆರ್ ಗವಿಯಪ್ಪನವರು ಸ್ಥಳಕ್ಕೆ ಪರಿಶೀಲಿಸಲು ಬರುವುದಾಗಿ ಹೇಳಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News