ತೀರ್ಥರಾಮ ದೇವರತ್ತಿಮಾರು
ಪುತ್ತೂರು: ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ದೇವರತ್ತಿಮಾರು ನಿವಾಸಿ ಬೆಳಿಯಪ್ಪ ಗೌಡರ ಪುತ್ರ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ತೀರ್ಥರಾಮ ದೇವರತ್ತಿಮಾರು(30) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಮೃತರು ಚಾರ್ವಾಕ ದೇವಿನಗರ ಶಿವದುರ್ಗಾ ಗೆಳೆಯರ ಬಳಗ ಉಪಾಧ್ಯಕ್ಷರಾಗಿ, ಕಬಡ್ಡಿ ತರಬೇತುದಾರರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು. ಇವರಿಂದ ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಮೃತರು ತಂದೆ,ತಾಯಿ, ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ.
Next Story