ಅರುಣಲಕ್ಷ್ಮೀ ಎಸ್.
ಪುತ್ತೂರು, ಎ.11: ಒಳಮೊಗರು ಗ್ರಾಮದ ಕುಂಬ್ರ ನಿವಾಸಿ ಕೊಂಬೆಟ್ಟು ಕಾಲೇಜ್ನ ಇಂಗ್ಲಿಷ್ ಉಪನ್ಯಾಸಕ ರಾಮಚಂದ್ರ ಭಟ್ರ ಪತ್ನಿ ಅರುಣಲಕ್ಷ್ಮೀ ಎಸ್.(52) ಹೃದಯಾಘಾತದಿಂದ ರವಿವಾರ ನಿಧನರಾದರು.
ಮೃತರು 27 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮೃತರ ಕುಟುಂಬಸ್ಥರು ಮೃತರ ದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾನ ಮಾಡಿದ್ದಾರೆ.
Next Story