ಮನೋಜ್ ಕುಮಾರ್
ಪುತ್ತೂರು, ಮೇ 15: ಪುತ್ತೂರಿನ ಸಂಕೇತ್ ಕ್ರೆಡಿಟ್ ಆ್ಯಂಡ್ ಇನ್ವೆಸ್ಟ್ಮೆಂಟ್ ಸಂಸ್ಥೆಯ ಮಾಲಕರಾಗಿದ್ದ ಪುತ್ತೂರಿನ ಹೆಬ್ಬಾರ ಬೈಲು ನಿವಾಸಿ ಮನೋಜ್ ಕುಮಾರ್ ಎಚ್.(46) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಮೃತ ಮನೋಜ್ ಕುಮಾರ್ ಒಡಿಯೂರು ಗುರುದೇವಾ ಸೇವಾ ಬಳಗದ ಉಪಾಧ್ಯಕ್ಷರಾಗಿದ್ದು, ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದ ಸಾರ್ವಜನಿಕ ಉತ್ಸವ ಸಮಿತಿಯಲ್ಲಿ ಸಕ್ರಿಯರಾಗಿದ್ದರು.
ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
Next Story