ಮುಚ್ಚಿದ ಬಾರುಗಳನ್ನು ತೆರೆಯುವುದಿಲ್ಲ, ಪಾನನಿರೋಧ ಸರಕಾರದ ನೀತಿಯಾಗಿದೆ: ಕೇರಳ ಅಬಕಾರಿ ಸಚಿವ ರಾಮಕೃಷ್ಣನ್
ತಿರುವನಂತಪುರಂ, ಮೇ 26: ರಾಜ್ಯದಲ್ಲಿ ಮುಚ್ಚಿರುವ ಬಾರ್ಗಳನ್ನು ತೆರೆಯುವುದಿಲ್ಲ ಎಂದು ಅಬಕಾರಿ ಸಚಿವ ಟಿ.ಪಿ. ರಾಮಕೃಷ್ಣನ್ ಹೇಳಿದ್ದಾರೆ. ಪಾನನಿರೋಧ ಸರಕಾರದ ನೀತಿಯಾಗಿದೆ. ಮದ್ಯದ ವಿರುದ್ಧ ವ್ಯಾಪಕ ಜಾಗೃತಿಯನ್ನು ಸರಕಾರ ನಡೆಸಲಿದೆ ಎಂದು ಅವರು ಹೇಳಿದ್ದಾರೆ. ಮದ್ಯನೀತಿಯಲ್ಲಿ ಬದಲಾವಣೆ ತರುವುದಿದ್ದರೆ ಅದು ಎಲ್ಡಿಎಫ್ನ ಇತರ ಪಕ್ಷಗಳೊಂದಿಗೆ ಆಲೋಚಿಸಿ ತೀರ್ಮಾನಿಸಲಾಗುವುದು. ಬಾರ್ಗಳನ್ನು ಮುಚ್ಚಿದ ನಂತರ ಮದ್ಯಬಳಕೆ ಹೆಚ್ಚಿದೆ. ಆದರೆ ಮದ್ಯಪಾನವನ್ನು ನಿಯಂತ್ರಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Next Story