ಫೈಝಾಬಾದ್ ಬಜರಂಗದಳ ಸಂಚಾಲಕನ ಬಂಧನ
ಶಸ್ತ್ರಾಸ್ತ್ರ ತರಬೇತಿ ಶಿಬಿರ
ಫೈಝಾಬಾದ್, ಮೇ 26: ಬಜರಂಗದಳದ ಫೈಝಾಬಾದ್ ಹಾಗೂ ಅಯೋದ್ಯಾ ಘಟಕದ ಸಂಚಾಲಕ ಮಹೇಶ್ ಮಿಶ್ರಾರನ್ನು ಮುಸ್ಲಿಮರ ಧಾರ್ಮಿಕ ಭಾವನೆ ಘಾಸಿಗೊಳಿಸಿದ ಹಾಗೂ ಕೋಮು ದ್ವೇಷ ಹರಡಿದ ಆರೋಪದಲ್ಲಿ ಇಂದು ಬಂಧಿಸಲಾಗಿದೆ.
ಬಜರಂಗದಳವು ಮೇ 14ರಂದು ತರಬೇತಿ ಶಿಬಿರವೊಂದನ್ನು ನಡೆಸಿತ್ತು. ಅದರಲ್ಲಿ ಕಾರ್ಯಕರ್ತರು ಸ್ಕಲ್ ಕ್ಯಾಪ್ ಹಾಗೂ ಚೌಕಳಿ ಶಾಲುಗಳನ್ನು ಧರಿಸಿದ್ದ ‘ದಂಗೆಕೋರರು ಹಾಗೂ ಭಯೋತ್ಪಾದಕರನ್ನು’ ಮಟ್ಟ ಹಾಕುವ ನಕಲಿ ಕವಾಯತೊಂದರ ಪ್ರದರ್ಶನ ನಡೆದಿತ್ತು.
ಮಂಗಳವಾರ ರಾತ್ರಿ ಅಯೋಧ್ಯೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಬಜರಂಗದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮಿಶ್ರಾರನ್ನು ಇಂದು ಸಂಜೆ ಬಂಧಿಸಲಾಗಿದೆಯೆಂದು ಫೈಝಾಬಾದ್ನ ಹಿರಿಯ ಪೊಲೀಸ್ ಅಧೀಕ್ಷಕ ಮೋಹಿತ್ ಗುಪ್ತಾ ತಿಳಿಸಿದ್ದಾರೆ.
.......
ಎಲ್ಒಸಿಯಲ್ಲಿ ಇಬ್ಬರು ನುಸುಳುಕೋರರ ಹತ್ಯೆ
ಶ್ರೀನಗರ, ಮೇ 26: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ನೌಗಾಂವ್ ವಲಯದಲ್ಲಿ ಗಡಿಯಾಚೆಯಿಂದ ಒಳ ನುಸುಳುವ ಭಾರೀ ಯತ್ನವೊಂದನ್ನು ಸೇನೆಯು ತಡೆದಿದೆ. ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.
ನಿಯಂತ್ರಣ ರೇಖೆಯನ್ನು ಕಾಯುತ್ತಿದ್ದ ಪಡೆಗಳಿಗೆ 506 ಭಯೋತ್ಪಾದಕರ ಗುಂಪೊಂದು ಎದುರಾಯಿತು. ಅವರು ಇಂದು ನಸುಕಿನ ವೇಳೆ ನೌಗಾಂವ್ ವಲಯದ ಟೂಟ್ ಮಾರಿ ಗಲಿಯ ಸಮೀಪ ಗಡಿಯನ್ನು ನುಸುಳುವುದಕ್ಕೆ ಪ್ರಯತ್ನಿಸುತ್ತಿದ್ದರೆಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ರೈಫಲ್ಸ್ನ 35 ಯೋಧರು ನುಸುಳುತ್ತಿರುವ ಭಯೋತ್ಪಾದಕರನ್ನು ತಡೆದಾಗ ಅವರು ಗುಂಡು ಹಾರಿಸತೊಡಗಿತು. ಯೋಧರು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ಆರಂಭವಾಯಿತು. ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿದ್ದು, ಅವರ ಶವಗಳು ಕಾಳಗ ನಡೆದ ಸ್ಥಳದಲ್ಲೇ ಇವೆ. ಕಾರ್ಯಾಚರಣೆ ಮುಂದುವರಿದಿದೆಯೆಂದು ಅವರು ವಿವರಿಸಿದ್ದಾರೆ.
ಉಳಿದ ಭಯೋತ್ಪಾದಕರ ನಿಗ್ರಹಕ್ಕಾಗಿ ಹೆಚ್ಚುವರಿ ಯೋಧರನ್ನು ಕಳುಹಿಸಲಾಗಿದೆಯೆಂದು ಶಿಕ್ಷಣ ಮೂಲಗಳು ತಿಳಿಸಿವೆ.