ಲೈಂಗಿಕ ಕಾರ್ಯಕರ್ತೆಯರಿಗೆ,ಎಚ್ಐವಿ ರೋಗಿಗಳಿಗೆ ಎರಡು ರೂ.ಗೆ ಕೆಜಿ ಅಕ್ಕಿ
ಪ.ಬಂ. ಸರಕಾರದ ನಿರ್ಧಾರ
ಕೋಲ್ಕತಾ,ಜೂ.12: ರಾಜ್ಯದಲ್ಲಿಯ ಲೈಂಗಿಕ ಕಾರ್ಯಕರ್ತೆಯರಿಗೆ ಮತ್ತು ಬಡ ಎಚ್ಐವಿ ರೋಗಿಗಳಿಗೆ ಪ್ರತಿ ಕೆ.ಜಿ.ಗೆ ಎರಡು ರೂ.ದರದಲ್ಲಿ ಅಕ್ಕಿಯನ್ನು ಒದಗಿಸಲು ಪಶ್ಚಿಮ ಬಂಗಾಲ ಸರಕಾರವು ನಿರ್ಧರಿಸಿದೆ.
ಈ ಯೋಜನೆಯು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪರಿಕಲ್ಪನೆಯಾಗಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರಕಾರವೊಂದು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ರಾಜ್ಯದ ಆಹಾರ ಮತ್ತು ಪೂರೈಕೆ ಸಚಿವ ಜ್ಯೋತಿಪ್ರಿಯೊ ಮಲಿಕ್ ಅವರು ರವಿವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಬಡ ಕುಷ್ಠರೋಗಿಗಳು,ಮೂಕ ಮತ್ತು ಕಿವುಡ ಮಕ್ಕಳನ್ನೂ ಈ ಯೋಜನೆಗೆ ಸೇರ್ಪಡೆಗೊಳಿಸಲಾಗುವುದು ಮತ್ತು ಮೊದಲ ಹಂತದಲ್ಲಿ ರಾಜ್ಯಾದ್ಯಂತ ಒಂದು ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗುವುದು ಎಂದರು.
Next Story