11 ರಾಜ್ಯಗಳ ಇನ್ನೂ 147 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ: ಶಕ್ತಿ ಸಚಿವಾಲಯ
ಹೊಸದಿಲ್ಲಿ, ಜೂ.13: ಜೂನ್ 12ಕ್ಕೆ ಅಂತ್ಯವಾದ ವಾರದಲ್ಲಿ 11 ರಾಜ್ಯಗಳ ಒಟ್ಟು 147 ಗ್ರಾಮಗಳಿಗೆ ‘ದೀನ್ ದಯಾಳ್ ಉಪಾಧ್ಯಾಯ ಗ್ರಾಮ್ ಜ್ಯೋತಿ ಯೋಜನಾ’ದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆಯೆಂದು ಹೇಳಿಕೆಯೊಂದು ಸೋಮವಾರ ತಿಳಿಸಿದೆ.
ವಿದ್ಯುದೀಕರಣಗೊಂಡ ಗ್ರಾಮಗಳಲ್ಲಿ 76 ಅಸ್ಸಾಂ, 28 ಜಾರ್ಖಂಡ್, 10 ಬಿಹಾರ, 6 ಮೇಘಾಲಯ, ಒಂದು ಉತ್ತರಪ್ರದೇಶ, 3 ಛತ್ತೀಸ್ಗಡ, 4 ಅರುಣಾಚಲಪ್ರದೇಶ, 6 ಒಡಿಶಾ, 9 ಮಧ್ಯಪ್ರದೇಶ ಹಾಗೂ ತಲಾ 2 ಗ್ರಾಮಗಳು ಮಣಿಪುರ ಹಾಗೂ ರಾಜಸ್ಥಾನಗಳಲ್ಲಿವೆಯೆಂದು ಕೇಂದ್ರ ವಿದ್ಯುತ್ ಸಚಿವಾಲಯದ ಹೇಳಿಕೆ ವಿವರಿಸಿದೆ.
ಇಂದಿನ ವರೆಗೆ ಒಟ್ಟು 8,242 ಗ್ರಾಮಗಳು ವಿದ್ಯುದೀಕರಿಸಲ್ಪಟ್ಟಿವೆಯೆಂದು ಅದು ಹೇಳಿದೆ.
2018ರ ಮೇ 1ರೊಳಗಾಗಿ ಉಳಿದ 10,357 ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಸರಕಾರ ನಿರ್ಧರಿಸಿವೆ. ಉಳಿದಿರುವ 10,210 ಗ್ರಾಮಗಳಲ್ಲಿ 6,557 ಗ್ರಾಮಗಳಿಗೆ ವಿದ್ಯುಜ್ಜಾಲದ ಮೂಲಕ ವಿದ್ಯುತ್ ಒದಗಿಸಲಾಗುವುದು. ಭೌಗೋಳಿಕ ಅಡಚಣೆಗಳಿಂದ ಜಾಲದ ಪರಿಹಾರ ಲಭ್ಯವಿರುವ 2,850 ಗ್ರಾಮಗಳಿಗೆ ಜಾಲದ ಹೊರಗಿಂದ ಸಂಪರ್ಕ ನೀಡಲಾಗುವುದು. 344 ಗ್ರಾಮಗಳನ್ನು ವಿದ್ಯುದೀಕರಿಸುವ ಹೊಣೆ ರಾಜ್ಯ ಸರಕಾರಗಳದ್ದಾಗಿದೆ ಹಾಗೂ 459 ಗ್ರಾಮಗಳಲ್ಲಿ ಜನವಸತಿಯಿಲ್ಲವೆಂದು ಹೇಳಿಕೆ ತಿಳಿಸಿದೆ.