ರಾಷ್ಟ್ರೀಯ ಅರಣ್ಯ ನೀತಿಯ ಕರಡು ಸಿದ್ಧವಾಗಿಲ್ಲ: ಸರಕಾರ
ಹೊಸದಿಲ್ಲಿ, ಜೂ.25: ಭೋಪಾಲದ ಅರಣ್ಯ ವ್ಯವಸ್ಥಾಪನ ರಾಷ್ಟ್ರೀಯ ಸಂಸ್ಥೆ ನಡೆಸಿದ ಅಧ್ಯಯನವೊಂದರ ವರದಿಯನ್ನು ರಾಷ್ಟ್ರೀಯ ಅರಣ್ಯ ನೀತಿಯ ಕರಡೆಂದು ಅದರ ಜಾಲತಾಣದಲ್ಲಿ ಅಜಾಗರೂಕತೆಯಿಂದ ಹಾಕಿದೆ. ನೀತಿ ದಾಖಲೆಯು ಇನ್ನಷ್ಟೇ ಅಂತಿಮಗೊಳ್ಳಬೇಕಿದೆಯೆಂದು ಪರಿಸರ ಸಚಿವಾಲಯವಿಂದು ತಿಳಿಸಿದೆ.
ಸಚಿವಾಲಯವು ರಾಷ್ಟ್ರೀಯ ಅರಣ್ಯ ನೀತಿಗೆ ಸಂಬಂಧಿಸಿ ಯಾವುದೇ ಕರಡು ಅಧಿಸೂಚನೆಯನ್ನು ಹೊರಡಿಸಿಲ್ಲ. ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿರುವುದು ಭೋಪಾಲದ ಐಐಎಫ್ಎಂನ ಒಂದು ಅಧ್ಯಯನ ವರದಿಯಾಗಿರುತ್ತದೆಂದು ಅರಣ್ಯ ಮಹಾ ನಿರ್ದೇಶಕ ಶರದ್ ನೇಗಿ ಹೇಳಿಕೆಯೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.
ಐಐಎಫ್ಎಂ-ಭೋಪಾಲ ಸಿದ್ಧಪಡಿಸಿರುವ ಅಧ್ಯಯನ ವರದಿಯನ್ನು ಅಜಾಗರೂಕತೆಯಿಂದ ವೆಬ್ಸೈಟ್ನಲ್ಲಿ ಅನ್ಲೋಡ್ ಮಾಡಲಾಗಿದೆ. ಅದನ್ನು ಸಚಿವಾಲಯ ವೌಲ್ಯಮಾಪನ ಮಾಡಿಲ್ಲವೆಂದು ಅವರು ತಿಳಿಸಿದ್ದಾರೆ.
Next Story