ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ರಾಜಕೀಯ ಎಂಟ್ರಿಗೆ ಕ್ಷಣಗಣನೆ
ಹೊಸದಿಲ್ಲಿ,ಜುಲೈ1: ಕಾಂಗ್ರೆಸ್ನ "ಮಿಶನ್ ಯುಪಿ’ ಚುನಾವಣಾ ಸಿದ್ಧತೆ ಭರದಿಂದ ಸಾಗುತ್ತಿದೆ. ಪ್ರಿಯಾಂಕರನ್ನು ಉತ್ತರಪ್ರದೇಶ ರಾಜಕೀಯಕ್ಕೆ ಕರೆತರುವ ಬೇಡಿಕೆಯನ್ನು ಕಾರ್ಯಕರ್ತರು ಮತ್ತು ಉತ್ತರಪ್ರದೇಶದ ಉಸ್ತುವಾರಿ ವಹಿಸಿದ ಗುಲಾಮ್ ನಬಿ ಆಝಾದ್ ಬಲವಾಗಿ ಮುಂದಿಟ್ಟಿದ್ದು ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ವಾದ್ರಾರ ರಾಜಕೀಯ ಪ್ರವೇಶಕ್ಕೆ ಸೋನಿಯಾಗಾಂಧಿ ಮತ್ತು ರಾಹುಲ್ಗಾಂಧಿಯವರ ಸಮ್ಮತಿಯೊಂದೇ ಬಾಕಿ ಉಳಿದಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಈ ಸಲ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯುವ ಶತಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ಕಾರ್ಡ್ ಆಡುವ ಮನಸು ಮಾಡಿದೆ.ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್ನ ಯಶಸ್ಸಿಗಾಗಿ ಪ್ರಿಯಾಂಕಾರನ್ನು ಪ್ರಧಾನ ಮುಖವಾಗಿ ಪ್ರಸ್ತುತ ಪಡಿಸುವುದರ ಪರವಾಗಿದ್ದಾರೆ. ಕಾರ್ಯಕರ್ತರು ನಿರಂತರ ಪ್ರಿಯಾಂಕಾರನ್ನು ಕರೆತರುವ ಕುರಿತು ಮಾತಾಡುತ್ತಿದ್ದಾರೆ. ಉತ್ತರಪ್ರದೇಶದ ಚುನಾವಣಾ ಉಸ್ತುವಾರಿಯಿರುವ ಪ್ರಿಯಾಂಕಾ, ರಾಹುಲ್ ಹಾಗೂ ಸೋನಿಯಾಗಾಂಧಿಯವರ ಲೋಕಸಭಾ ಕ್ಷೇತ್ರಗಳ ಹೊರಗೆ ಕೂಡಾ ಚುನಾವಣಾ ಪ್ರಚಾರ ನಡೆಸುವ ಅಗತ್ಯವನ್ನು ಗುಲಾಮ್ ನಬಿ ಆಝಾದ್ ಹೇಳಿದ್ದಾರೆ.
ಗುಲಾಮ್ ನಬಿ ಆಝಾದ್ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿಕೊಂಡ ಮೇಲೆ ಹಲವು ಬಾರಿ ಪ್ರಿಯಾಂಕಾರನ್ನು ಭೇಟಿಯಾಗಿಮಾತಾಡಿದ್ದಾರೆ. ರಾಜಕೀಯಕ್ಕೆ ಬರಲು ಪ್ರಿಯಾಂಕಾ ಒಪ್ಪಿಕೊಂಡಿದ್ದಾರೆ ಇನ್ನು ಸೋನಿಯಾ ರಾಹುಲ್ರಿಂದ ಗ್ರೀನ್ ಸಿಗ್ನಲ್ ಸಿಗಲು ಬಾಕಿಯಿದೆ ಎಂದು ಸ್ವತಃ ಕಾಂಗ್ರೆಸ್ ಮೂಲಗಳು ಹೇಳುತ್ತಿವೆೆ. ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಮರಳಿದ ಬಳಿಕ ಈ ಕುರಿತು ತೀರ್ಮಾನವಾಗುವ ನಿರೀಕ್ಷೆ ವ್ಯಕ್ತವಾಗುತ್ತಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಿರ್ಮಲ್ ಖತ್ರಿ ಹಠಾವೋ ಬೇಡಿಕೆ ಈಗ ತಣ್ಣಗಾಗಿದೆ. ಪಕ್ಷದ ಮೂಲಗಳ ಪ್ರಕಾರ ಅವರಿಗೆ ಕೆಲವು ದಿವಸಗಳವರೆಗೆ ಅದೇ ಸ್ಥಾನದಲ್ಲಿ ಮುಂದುವರಿಯಲು ಅಭಯ ದೊರಕಿದೆ. ಕಾಂಗ್ರೆಸ್ ಈಗ ಜನರೆಡೆಗೆ ತಲುಪುವ ಯಾವುದೇ ಅವಕಾಶವನ್ನು ಉತ್ತರಪ್ರದೇಶ ಮತ್ತು ಪಂಜಾಬ್ನಲ್ಲಿ ಬಿಟ್ಟುಕೊಡುತ್ತಿಲ್ಲ. ಪರಿಸ್ಥಿತಿಯ ಅಗತ್ಯಕ್ಕೆ ತಕ್ಕಂತೆ ನೀತಿ ರೂಪಿಸುವ ವಿಚಾರವನ್ನುಅದು ಚಿಂತಿಸುತ್ತಿದೆ.