ಸಚಿವ ಖಾದರ್ ಪ್ರವಾಸ
ಮಂಗಳೂರು, ಜು.8: ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ ಖಾದರ್ ಜು.9ರಂದು ಬೆಳಗ್ಗೆ 8:30ಕ್ಕೆ ಪಾವೂರು ಗ್ರಾಪಂ ವ್ಯಾಪ್ತಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. 9:30ಕ್ಕೆ ಮುಡಿಪು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಸತ್ ಉದ್ಘಾಟಿಸುವರು. ಪೂರ್ವಾಹ್ನ 11:30ಕ್ಕೆ ಬೆಂಗಳೂರಿಗೆ ತೆರಳುವರು ಎಂದು ಪ್ರಕಟನೆ ಕುಡಿಯುವ ನೀರಿಗೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಮುತ್ತಿಗೆಪುತ್ತೂರು, ಜು.8: ಕಳೆದ 6 ತಿಂಗಳಿನಿಂದ ಕುಡಿಯಲು ನೀರಿಲ್ಲದೆ ಗ್ರಾಮದ ಅಲಂಗೂರು ನಿವಾಸಿಗಳು ತೊಂದರೆ ಪಡುತ್ತಿದ್ದರೂ ಗ್ರಾಪಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಶುಕ್ರವಾರ ಒಳಮೊಗ್ರು ಗ್ರಾಮಸ್ಥರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ನಡೆದಿದೆ.ಗ್ರಾಪಂ ಮಾಜಿ ಸದಸ್ಯರಾದ ಇಸುಬು ಮೈದಾನಿಮೂಲೆ, ರಕ್ಷಿತ್ ರೈ ಮುಗೇರು ಹಾಗೂ ವಿನೋದ್ ಶೆಟ್ಟಿ ಮುಗೇರು ನೇತೃತ್ವದಲ್ಲಿ ಮುತ್ತಿಗೆ ನಡೆಸಲಾಯಿತು. ್ರಾಮದ ಅಲಂಗೂರು ಪರಿಸರದಲ್ಲಿ 14 ಮನೆಗಳಿದ್ದು, ಇನ್ನೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕೊರಗ ಸಮುದಾಯದ ಕಾಲನಿಯೂ ಇದೆ. ಇವರಿಗೆ ಗ್ರಾಪಂ ನಳ್ಳಿನೀರು ಬಿಟ್ಟರೆ ಬೇರೆ ವ್ಯವಸ್ಥೆ ಇಲ್ಲ. ನಳ್ಳಿ ನೀರು ಬಾರದೇ ಇದ್ದರೆ 1 ಕಿ. ಮೀ. ದೂರದಿಂದ ನೀರು ಹೊತ್ತು ತರಬೇಕಾದ ಸ್ಥಿತಿ ಇದೆ ಎಂದು ಗ್ರಾಮಸ್ಥರು ಆರೋಪಿಸಿದರು. ಸ್ಥಳೀಯರಾದ ಲಲಿತಾ, ಮೊಯ್ದಿನ್, ನಾರಾಯಣ ಪೂಜಾರಿ, ಉಕ್ರಪ್ಪ, ಐತ, ಬಾಬು, ರಮೇಶ್, ಪುರುಷೋತ್ತಮ, ಶೀನಪ್ಪ, ಚನಿಯಾರು, ಇಬ್ರಾಹೀಂ, ಸೀತಕ್ಕ, ಬಾಗಿ, ಸಹದ್, ಸಂದೇಶ, ಲತಾ, ದೀಪಕ್, ಪ್ರೇಮ, ಝುಹುರಾ, ಜಯರಾಂ, ಮೊಯ್ದುಕುಟ್ಟಿ, ಎಸ್.ಎಂ. ಮುಹಮ್ಮದ್ ಕುಂಬ್ರ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.ತಿಳಿಸಿದೆ.