ಫಿಲೊಮಿನಾದಲ್ಲಿ ವನಮಹೋತ್ಸವ ಆಚರಣೆ
ಪುತ್ತೂರು, ಜು.10: ಪರಿಸರ ಸಂರಕ್ಷಣೆಯ ಮೂಲಕ ಪ್ರಾಕೃತಿಕ ವಿಕೋಪಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಸಂತ ಫಿಲೊಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ರೆ.ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು. ಕಾಲೇಜಿನ ಎನ್ಸಿಸಿ ಮತ್ತು ಎನ್ನೆಸ್ಸೆಸ್ ಘಟಕಗಳ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂತ ಫಿಲೊಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಿಯೊ ನೊರೊನ್ಹ, ಪ.ಪೂ. ಕಾಲೇಜಿನ ಪ್ರಾಂಶುಪಾಲ ರೆ.ಾ. ವಿಜಯ್ ಲೋಬೊ, ಕಾಲೇಜಿನ ವಾರ್ತಾ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಪ್ರೊ. ದಿನಕರ ರಾವ್ ಉಪಸ್ಥಿತರಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಕಾರಿ ಪ್ರೊ.ರಾಧಾಕೃಷ್ಣ ಗೌಡ ಸ್ವಾಗತಿಸಿದರು. ಪ್ರೊ.ಗೀತಾ ಪೂರ್ಣಿಮಾ ವಂದಿಸಿದರು. ಎನ್ಸಿಸಿ ಅಕಾರಿ ಲೆ.ಜೋನ್ಸನ್ ಡೇವಿಡ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.
Next Story