ಕಸ್ಟಮ್ಸ್ ಮಾಜಿ ಅಧಿಕಾರಿಯ ಹತ್ಯೆ
ಹೊಸದಿಲ್ಲಿ,ಜುಲೈ 20: ದಿಲ್ಲಿಯ ಮಯೂರ್ ವಿಹಾರ್ನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರನ್ನು ಕೊಲೆಗೈದ ಘಟನೆ ವರದಿಯಾಗಿದೆ. ಕಸ್ಟಮ್ಸ್ ವಿಭಾಗದ ಮಾಜಿ ಅಧಿಕಾರಿ ವಿಜಯ್ಕುಮಾರ್(70)ಕೊಲೆಗೀಡಾದ ವ್ಯಕ್ತಿಯಾಗಿದ್ದು, ಮಯೂರ್ ವಿಹಾರ್ನ ಸಮಾಚಾರ್ ಅಪಾರ್ಟ್ಮೆಂಟ್ನಲ್ಲಿ ಮೃತರಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎಂದು ವರದಿತಿಳಿಸಿದೆ.ರೋಡೆಗೆ ಶ್ರಮಿಸಿದ ವೇಳೆ ವಿಜಯ್ಕುಮಾರ್ರನ್ನು ಹತ್ಯೆಗೈದು ಆರೋಪಿಗಳು ಪರಾರಿಯಾಗಿರಬಹುದೆಂದು ಸಂದೇಹಿಸಲಾಗಿದ್ದು, ವಾರದ ಹಿಂದೆ ಇದೇ ಮಯೂರ್ ವಿಹಾರ್ನಲ್ಲಿ ಕಳ್ಳತನ ಮಾಡಿದ್ದಾನೆಂದು ಆರೋಪ ಹೊರಿಸಿ ಕೇರಳ ಮೂಲದ ಬಾಲಕನೊಬ್ಬನನ್ನು ಕೆಲವರು ಥಳಿಸಿ ಕೊಂದು ಹಾಕಿದ್ದ ಘಟನೆ ನಡೆದಿತ್ತು ಎಂದು ವರದಿ ವಿವರಿಸಿದೆ.
Next Story