ಮಕ್ಕಳ ಬಗ್ಗೆ ವರದಿಗಾರಿಕೆಯ ವೇಳೆ ಎಚ್ಚರ ಅಗತ್ಯ: ನಿಕೇಶ್ ಶೆಟ್ಟಿ
ಮಂಗಳೂರು, ಜು.21: ಬಾಲ ನ್ಯಾಯ ಕಾಯ್ದೆಯಡಿ ಪ್ರತೀ ಮಗು ಕೂಡಾ ಗೌಪ್ಯತೆ ಮತ್ತು ಖಾಸಗಿತನ ಕಾಯ್ದುಕೊಳ್ಳುವ ಹಕ್ಕು ಹೊಂದಿರುವುದರಿಂದ ಸಮ ಸ್ಯೆಯಲ್ಲಿರುವ ಮಕ್ಕಳ ಬಗ್ಗೆ ವರದಿಗಾರಿಕೆಯ ಸಂದ ರ್ಭವೂ ಮಗುವಿನ ಗೌಪ್ಯತೆಯನ್ನು ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯ ಎಂದು ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಅಧ್ಯಕ್ಷ ನಿಕೇಶ್ ಶೆಟ್ಟಿ ಹೇಳಿದರು. ಅವರು ಇಂದು ನಗರದ ಪ್ರೆಸ್ಕ್ಲಬ್ನಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ‘ಮಕ್ಕಳ ಹಕ್ಕುಗಳ ಸೂಕ್ಷ್ಮತೆ’ ಬಗ್ಗೆ ಮಾಧ್ಯಮ ಪ್ರತಿನಿಧಿ ಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತ ನಾಡುತ್ತಿದ್ದರು. ಮಕ್ಕಳ ಸಮಸ್ಯೆ ಕುರಿತು ಪೋಷಕರಿಗೆ ಆಪ್ತ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುವಂತೆ ದ.ಕ. ಹಾಗೂ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಪೋಷಕರ ಸಹಾಯವಾಣಿ ಮುಂದಿನ ತಿಂಗಳಿಂದ ಪೂರ್ಣ ಸ್ವರೂಪದಲ್ಲಿ ಕಾರ್ಯಾ ರಂಭಿಸಲಿದೆ ಎಂದವರು ಈ ಸಂದರ್ಭ ತಿಳಿಸಿದರು. ಪುಟ್ಟ ಮಕ್ಕಳನ್ನು ಹಿಡಿದುಕೊಂಡು ನಗರದಲ್ಲಿ ಬೇಡುವವರ ಬಗ್ಗೆ ಸ್ವಯಂಪ್ರೇರಿತ ದೂರು ದಾಖ ಲಿಸದೆ ಇರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಕ್ಕಳ ಪುನರ್ವಸತಿ ಸಮಸ್ಯೆ ಯಿಂದಾಗಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾ ಯಕತೆ ವ್ಯಕ್ತಪಡಿಸಿದರು. ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಸಿ. ದುಲ್ಸಿನ್ ಮಾತನಾಡಿ, ಇತ್ತೀಚಿನ ಕೆಲ ವರ್ಷಗಳಲ್ಲಿ ಕಾನೂನಿನ ಸಂಘರ್ಷಕ್ಕೆ ತುತ್ತಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿವೆ. ಮಗು ಸ್ನೇಹಿ ಪರಿಸರ ನಿರ್ಮಾಣದ ಕುರಿತು ಎಲ್ಲರೂ ಆಲೋಚನೆ ನಡೆಸಬೇಕಾಗಿದೆ ಎಂದು ಹೇಳಿದರು.
ಕಾನೂನಿನಂತೆ ‘ಬಾಲಾಪರಾಧಿ’ ಪ್ರಯೋಗ ತಪ್ಪು. ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು ಎನ್ನುವುದು ಸರಿಯಾದ ಪ್ರಯೋಗ. ಮಕ್ಕಳ ವಿಷಯ ದಲ್ಲಿ ‘ರಿಮಾಂಡ್ ಹೋಂ’ ಬಳಕೆಯ ಬದಲು ‘ಒಬ್ಸರ್ವೇಶನ್ ಹೋಂ’ ಎನ್ನುವುದು ಸೂಕ್ತ ಎಂದು ಪಡಿ ನಿರ್ದೇಶಕ ರೆನ್ನಿ ಡಿಸೋಜ ಸಲಹೆ ನೀಡಿದರು.
ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್ ಸ್ವಾಗತಿಸಿದರು. ಪ್ರೆಸ್ಕ್ಲಬ್ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ವಂದಿಸಿದರು.
ಪೋಷಕರ ಸಹಾಯವಾಣಿ
ಪೋಷಕರ ಸಹಾಯವಾಣಿ ವ್ಯವಸ್ಥೆಯು ಪ್ರಾಯೋ ಗಿಕವಾಗಿ ಕಾರ್ಯಾರಂಭಗೊಂಡಿದ್ದು, ಮಕ್ಕಳ ಬಗ್ಗೆ ಮಾರ್ಗದರ್ಶನ- ನೆರವು ಬಯಸುವವರು ದೂರವಾಣಿ ಮೂಲಕ ಅಥವಾ ಸ್ವತಃ ವ್ಯವಸ್ಥೆಯ ನಿರ್ವಹಣೆ ಜವಾಬ್ದಾರಿ ವಹಿಸಿ ಕೊಂಡಿರುವ ಸರಕಾರೇತರ ಸಂಸ್ಥೆಯನ್ನು ಸಂಪರ್ಕಿಸಬಹುದು. ಮಕ್ಕಳ ಹಕ್ಕುಗಳ ಅಭಿವೃದ್ಧಿ ಮತ್ತು ಸಂಪನ್ಮೂಲ ಕೇಂದ್ರದ ವತಿಯಿಂದ ಈ ಸಹಾಯವಾಣಿ ಕಾರ್ಯಾಚರಿಸಲಿದೆ. ದೂರವಾಣಿ ಸಂಖ್ಯೆ: 0824- 2420111, ಮೊ.7829449740 ಅನ್ನು ಸಂಪರ್ಕಿಸಬಹುದು.