ಇಬ್ಬರು ಯೋಧರು ಎನ್ಕೌಂಟರ್ಗೆ ಬಲಿ
ಶ್ರೀನಗರ, ಆ.8: ಜಮ್ಮು-ಕಾಶ್ಮೀರದ ನಿಯಂತ್ರಣ ರೇಖೆಯ ಬಳಿಯಿರುವ ಮಚ್ಚಿಲ್ ವಲಯದಲ್ಲಿ ಇಂದು ನಡೆದ ಕಾರ್ಯಾಚರಣೆಯೊಂದರ ವೇಳೆ ಗಡಿ ರಕ್ಷಣಾ ಪಡೆಯ ಇಬ್ಬರು ಯೋಧರು ಹಾಗೂ ಒಬ್ಬ ಭಯೋತ್ಪಾದಕ ಹತರಾಗಿದ್ದಾರೆ.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚ್ಚಿಲ್ ವಲಯದಲ್ಲಿ ಭಯೋತ್ಪಾದಕರ ಇರುವಿಕೆಯ ಬಗ್ಗೆ ಮಾಹಿತಿಯನ್ನಾಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವೆಂದು ಭೂ ಸೇನಾಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಒಬ್ಬ ಭಯೋತ್ಪಾದಕ ಹಾಗೂ ಇಬ್ಬರು ಭದ್ರತಾ ಯೋಧರು ಹತರಾಗಿದ್ದಾರೆ. ಮುಂದಿನ ವಿವರ ಕಾಯಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.
Next Story