ಮಂಗಳೂರು: ನದಿಗೆ ಹಾರಿ ಬಸ್ ಮಾಲಕ ಆತ್ಮಹತ್ಯೆ?
ಮಂಗಳೂರು, ಆ.10: ನಗರದ ಮಂಗಳೂರಿನ ಜಪ್ಪಿನಮೊಗರು ನಿವಾಸಿ, ಖಾಸಗಿ ಬಸ್ ಮಾಲಕರೋರ್ವರು ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ನಗರದಲ್ಲಿ ಸಂಚರಿಸುವ ಶ್ರೀ ಗಣೇಶ್ ಪ್ರಸಾದ್ ಹೆಸರಿನ ಬಸ್ ಮಾಲಕ ನಾರಾಯಣ ಆಳ್ವ (60) ಅವರ ಅವರ ಕಾರು ಉಳ್ಳಾಲ ಸೇತುವೆ ಮಧ್ಯದಲ್ಲಿ ಪತ್ತೆಯಾಗಿದೆ.
ನಾರಾಯಣ ಆಳ್ವ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ರಾತ್ರಿಯಿಂದ ನಾಪತ್ತೆಯಾಗಿರುವ ಆಳ್ವ ಅವರನ್ನು ಮನೆಮಂದಿ ಎಲ್ಲಾ ಕಡೆ ಹುಡುಕಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಇವರ ಕಾರು ಉಳ್ಳಾಲ ಸೇತುವೆ ಬಳಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪಾಂಡೇಶ್ವರ ಠಾಣಾ ಪೊಲೀಸರು ಉಳ್ಳಾಲ ಸೇತುವೆ ಬಳಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಉಳ್ಳಾಲ ಸೇತುವೆಯ ಬಳಿಯಿದ್ದ ಕಾರನ್ನು ಪಾಂಡೇಶ್ವರ ಠಾಣೆಯಲ್ಲಿರಿಸಲಾಗಿದೆ.ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story