ಪಣಪಿಲ: ಯುವತಿ ನಾಪತ್ತೆ
ಮೂಡುಬಿದಿರೆ, ಆ.30: ಸ್ವಸಹಾಯ ಸಂಘದ ಹಣ ಕಟ್ಟಲು ಬೋರುಗುಡ್ಡೆಗೆಂದು ತೆರಳಿದ್ದ ಪಣಪಿಲದ ಗೇರು ಬೀಜ ಕಾರ್ಖಾನೆಯ ಕಾರ್ಮಿಕೆ ಅನಿತಾ(23)ಮನೆಗೆ ವಾಪಸಾಗದೆ ನಾಪತ್ತೆಯಾದ ಬಗ್ಗೆ ವರದಿಯಾಗಿದೆ.
ಗೇರು ಬೀಜ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದ ಅನಿತಾ ಆ.25ರಂದು ಬೆಳಗ್ಗೆ ಸ್ವಸಹಾಯ ಗುಂಪಿನ ಹಣ ಕಟ್ಟಲು ಬೋರುಗುಡ್ಡೆಗೆ ಹೋಗಿ ಬರುತ್ತೇನೆಂದು ಮನೆ ಯವರಲ್ಲಿ ಹೇಳಿ ಹೋದಾಕೆ ಕಾಣೆಯಾ ಗಿದ್ದಾರೆ. ಎಣ್ಣೆಕಪ್ಪುಮೈಬಣ್ಣ, ಗುಂಡು ಮುಖ ಹೊಂದಿರುವ ಈಕೆ ಮನೆ ಯಿಂದ ಹೊರಡುವಾಗ ಹಳದಿ ಬಣ್ಣದ ಚೂಡಿದಾರ ಧರಿಸಿದ್ದರೆನ್ನಲಾಗಿದೆ. ಯುವತಿಯ ತಂದೆ ದೇಜು ನೀಡಿದ ದೂರಿನಂತೆ ಮೂಡು ಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story