ಭಟ್ಕಳ: ಬಡ್ಡಿರಹಿತ ಬ್ಯಾಂಕ್ನ ಸ್ಥಾಪಕ ಸದಸ್ಯ ಶಂಸುದ್ದೀನ್ ಅಕ್ರಮಿ ನಿಧನ
ಭಟ್ಕಳ, ಸೆ.11: ಇಲ್ಲಿನ ಬಡ್ಡಿ ರಹಿತ ಬ್ಯಾಂಕ್ ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಸ್ಥಾಪಕ ಸದಸ್ಯ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಹಿರಿಯ ಸದಸ್ಯ ಶಂಸುದ್ದೀನ್ ಅಕ್ರಮಿ(95) ಅನಾರೋಗ್ಯದಿಂದಾಗಿ ರವಿವಾರ ತಕಿಯಾ ಸ್ಟ್ರೀಟ್ನ ತಮ್ಮ ನಿವಾಸದಲ್ಲಿ ನಿಧನರಾದರು.
ಇವರು ಭಟ್ಕಳದಲ್ಲಿ ಹಲವಾರು ಸಂಘಟನೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ಮೃತರು ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಭಟ್ಕಳ ಜಮಾಅತೆ ಇಸ್ಲಾಮಿ ಹಿಂದ್ ಶಾಖಾಧ್ಯಕ್ಷ ಮುಜಾಹಿದ್ ಮುಸ್ತಫಾ, ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಸೈಯ್ಯದ್ ಅಶ್ರಫ್ ಬರ್ಮಾವರ್, ತಲ್ಹಾ ಸಿದ್ದಿಬಾಪ, ಮೌಲಾನ ಸೈಯದ್ ಝುಬೈರ್ ಎಸ್.ಎಂ., ಐಟಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಆರ್.ಮಾನ್ವಿ ಸೇರಿದಂತೆ ಹಲವು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
Next Story