ನಾದಸ್ವರ ವಾದಕ ದೇವದಾಸ್
ಸುಬ್ರಹ್ಮಣ್ಯ, ಸೆ.30: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ 15 ವರ್ಷಗಳಿಂದ ನಾದಸ್ವರ ವಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಲಾವಿದ ದೇವದಾಸ್ ಎಸ್.ಕೆ.(59) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನ ಹೊಂದಿದರು. ಇವರು ಸ್ಯಾಕ್ಸೋಫೋನ್ ಮತ್ತು ನಾದಸ್ವರ ಎರಡರಲ್ಲೂ ಕಲಾವಿದರಾಗಿದ್ದರು. ದೇಶ ವಿದೇಶಗಳಲ್ಲಿ ಕಚೇರಿಯನ್ನು ನೀಡಿದ ಇವರು ಅಪಾರ ಶಿಷ್ಯರನ್ನು ಹೊಂದಿದ್ದರು.
ಮೃತರು ಪತ್ನಿ, ಅಪಾರ ಬಂಧು ಬಳಗ ಹಾಗೂ ಶಿಷ್ಯವರ್ಗದವರನ್ನು ಅಗಲಿದ್ದಾರೆ.
Next Story