ವಿಜಯ್ ಜೀವಾನಂದ ಗುರೂಜಿ
ಉಳ್ಳಾಲ, ಅ.4: ಜ್ಯೋತಿಷಿ ಸೋಮೇಶ್ವರ ಉಚ್ಚಿಲದ ವಿಜಯ್ ಜೀವಾನಂದ ಗುರೂಜಿ ಮಂಗಳವಾರ ನಿಧನರಾದರು. ಕಳೆದ ಕೆಲದಿನಗಳಿಂದ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಉಚ್ಚಿಲ ಪರಿಸರದಲ್ಲಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದ್ದ ಅವರು ಕೋಟಿ-ಚೆನ್ನಯರ ಸುರ್ಯವೂ ತನ್ನಲ್ಲಿದೆ ಇದೆ ಎಂದು ಸುರ್ಯಕ್ಕೆ ಪರ್ವವನ್ನು ಮಾಡಿ ಪ್ರಚಾರ ಪಡೆದಿದ್ದರು. ಗುರೂಜಿ ಅಂತ್ಯ ಕ್ರಿಯೆಯು ಬುಧವಾರ ಬೆಳಗ್ಗೆ 9:30ಕ್ಕೆ ವಾಮದಪದವಿನ, ಚೆನ್ನೈತೋಡಿ ಗ್ರಾಮದಲ್ಲಿ ನಡೆಯಲಿದ್ದು, ಗುರೂಜಿ ಹಿಂದೆಯೇ ನೀಡಿದ ನಿರ್ದೇಶನದಂತೆ ಅಲ್ಲಿ ಸಮಾಧಿ ಕ್ರಿಯೆ ನಡೆಯಲಿದೆ.
ಗುರೂಜಿ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
Next Story