ಅ.16: ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ
ಮಂಗಳೂರು, ಅ.12: ನಗರದ ರಾಮಕೃಷ್ಣ ಮಠ ಹಾಗೂ ಸುರತ್ಕಲ್ನ ಚಿರಂತನ ಚಾರಿಟೇಬಲ್ ಟ್ರಸ್ಟ್ನ ಜಂಟಿ ಸಹಭಾಗಿತ್ವದಲ್ಲಿ ಅ.16ರಂದು ಬೆಳಗ್ಗೆ 6:30ಕ್ಕೆ ಮಂಗಳಾದೇವಿ ಶ್ರೀರಾಮಕೃಷ್ಣ ಮಠದಲ್ಲಿ ಪಂಚಮದ ‘ಇಂಚರ-ವಿವೇಕ ಸ್ಮತಿ-2016’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಮಾನ ಮನಸ್ಸಿನ ಸಂಗೀತಾಸಕ್ತರ ಒಕ್ಕೂಟ ಪಂಚಮದ ಇಂಚರ ಬಳಗದಿಂದ ಈ ಕಾರ್ಯಕ್ರಮವನ್ನು ರಾಮಕೃಷ್ಣ ಮಠದಲ್ಲಿ ಬೆಳಗ್ಗೆ 6:30ರಿಂದ ಸಂಜೆ 7:30ರವರೆಗೆ ಆಯೋಜಿಸಲಾಗಿದೆ ಎಂದು ರಾಮಕೃಷ್ಣ ಮಠದ ಜಿತಕಾಮಾನಂದ ಸ್ವಾಮೀಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದೇ ಸಂದರ್ಭ ಹಿರಿಯ ವಯೋಲಿನ್ ವಾದಕ, ಸಂಗೀತ ಗುರು ಪಂ. ನಾರಾಯಣ ಪಂಡಿತ್ ಅವರನ್ನು ಸನ್ಮಾನಿಸಲಾಗುವುದು ಎಂದವರು ಮಾಹಿತಿ ನೀಡಿದರು. ಚಿರಂತನ ಚಾರಿಟೇಬಲ್ ಟ್ರಸ್ಟ್ನ ತೇಜಸ್ವಿ, ಡಾ. ಹರ್ಷರಾಜ್, ಭಾರವಿ ದೇರಾಜೆ ಉಪಸ್ಥಿತರಿದ್ದರು.
Next Story