ಅಬ್ದುಲ್ ಅಝೀಝ್
ರಿಯಾದ್, ಅ.12: ಚಾಲಕ ವೃತ್ತಿಯ ವೀಸಾದಲ್ಲಿ ಇಲ್ಲಿನ ಮನೆಯೊಂದಕ್ಕೆ ಕೆಲಸಕ್ಕೆ ಆಗಮಿಸಿದ್ದ ಮೂಡುಬಿದಿರೆ ಸಮೀಪದ ಗುಂಡುಕಲ್ಲು ಇಬ್ರಾಹೀಂ ಅವರ ಪುತ್ರ ಅಬ್ದುಲ್ ಅಝೀಝ್ (50) ಎಂಬವರು ಸೋಮವಾರ ಹೃದಯಾಘಾತದಿಂದ ನಿಧನ ಹೊಂದಿದರು.
ಕೇವಲ 20 ದಿನಗಳ ಹಿಂದೆಯಷ್ಟೆ ರಿಯಾದ್ಗೆ ಹೊಸ ವೀಸಾದಲ್ಲಿ ಬಂದಿದ್ದ ಇವರು, ಮುಹರ್ರಂ ಉಪವಾಸ ಆಚರಿಸಿದ್ದರೆಂದು ತಿಳಿದು ಬಂದಿದೆ. ನಿಧನದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ನ ಸಾಂತ್ವನ ವಿಭಾಗದ ಸಲೀಂ ಕನ್ಯಾಡಿ ಹಾಗೂ ಕೆಸಿಎಫ್ ರಿಯಾದ್ ವಲಯ ತಂಡದ ನಾಯಕರು ಮೃತರ ಮಾಲಕರನ್ನು ಭೇಟಿಯಾಗಿ ಮರಣೋತ್ತರ ಕ್ರಿಯೆಗೆ ಬೇಕಾದ ನೆರವು ನೀಡಿದರು. ಮೃತರ ಅಂತ್ಯಸಂಸ್ಕಾರ ಗುರುವಾರ ರಿಯಾದ್ನಲ್ಲೇ ಮಾಡಲಾಗುವುದು ಎಂದು ಕೆಸಿಎಫ್ ಕಾರ್ಯಕರ್ತ ಹನೀಫ್ ಬೆಳ್ಳಾರೆ ತಿಳಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
Next Story