ಕೈ ಸ್ವಾಧೀನ ಕಳೆದುಕೊಂಡ ವ್ಯಕ್ತಿಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
ಮಂಗಳೂರು, ಅ.19: ಎಡಕೈ ಸ್ವಾಧೀನ ಕಳೆದುಕೊಂಡ ವ್ಯಕ್ತಿಯೊಬ್ಬರಿಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿರುವುದಾಗಿ ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.
ಒಂದು ವರ್ಷದ ಹಿಂದೆ ನಡೆದ ಅಪಘಾತವೊಂದ ರಲ್ಲಿ ಯುವಕನ ಎಡಕೈಯ ಮೇಲಿನ ಭಾಗಕ್ಕೆ ತೀವ್ರ ಹಾನಿಯಾಗಿತ್ತು. ಗುಣಮುಖವಾಗದ ಸ್ಥಿತಿಯಲ್ಲಿದ್ದ ಕೈಯನ್ನು ಆಸ್ಪತ್ರೆಯ ಮೂಳೆ ತಜ್ಞ ಹಾಗೂ ಮೈಕ್ರೋ ಸಜರಿರ್ ವಿಾಗದ ಮುಖ್ಯಸ್ಥ ಡಾ.ಲತೀಶ್ ಲಿಯೋ ನೇತೃತ್ವದ ತಂಡ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿದೆ.
ಕೈಯ ಕೆಳಭಾಗದ ಮಾಂಸಖಂಡವನ್ನು ಮೇಲ್ಭಾಗಕ್ಕೆ ವರ್ಗಾಯಿಸುವ ಅಪರೂಪದ ಶಸ್ತ್ರಚಿಕಿತ್ಸೆಯಿಂದ ಯುವಕನ ಕೈ ಚಿಕಿತ್ಸೆಗೆ ಸ್ಪಂದಿಸತೊಡಗಿದೆ. ಮುಂದಿನ 9 ತಿಂಗಳಲ್ಲಿ ಸಂಪೂರ್ಣ ಚಟುವಟಿಕೆ ನಡೆಸಲು ಸಾಧ್ಯವಾಗಬಹುದು ಎಂದು ವೈದ್ಯರ ತಂಡ ವಿಶ್ವಾಸ ವ್ಯಕ್ತಪಡಿಸಿದೆ.
ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡದಲ್ಲಿ ಡಾ.ಪಿ.ಎಸ್. ಬಾಲಕೃಷ್ಣ ಆಚಾರ್, ನರ್ಸಿಂಗ್ ವಿಭಾಗದ ಸದಸ್ಯರು ಇದ್ದರು ಎಂದು ಪ್ರಕಟನೆ ತಿಳಿಸಿದೆ.
Next Story