ಕಳಚಿದ ಬಸ್ ಬಾಗಿಲು
ಉಪ್ಪಿನಂಗಡಿ, ಅ.26: ಕೆಎಸ್ಸಾರ್ಟಿಸಿ ಬಸ್ಸೊಂದರ ಬಾಗಿಲು ತೆಗೆಯುವ ಸಂದರ್ಭ ಬಾಗಿಲು ಏಕಾಏಕಿ ಕಳಚಿದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ನಡೆದಿದ್ದು, ಯಾರಿಗೂ ಯಾವುದೇ ಅನಾಹುತವಾಗಿಲ್ಲ.
ಧರ್ಮಸ್ಥಳದಿಂದ-ಪುತ್ತೂರು ಕಡೆಗೆ ತೆರಳುವ ಬಸ್ ಬುಧವಾರ ಬೆಳಗ್ಗೆ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಆಗಮಿಸಿದೆ. ಆ ಸಂದರ್ಭ ನಿರ್ವಾಹಕ ಬಸ್ನ ಬಾಗಿಲು ತೆಗೆದಾಗ ಬಾಗಿಲಿನ ಒಂದು ಕಡೆಯ ನಟ್ ಬೋಲ್ಟ್ನ ಜೋಡಣೆ ಕಳಚಿದ್ದು, ಬಸ್ನ ಬಾಗಿಲು ಅರ್ಧ ಕಳಚಿಕೊಂಡು ಬಸ್ನ ಹೊರಭಾಗದಲ್ಲಿ ನೇತಾಡತೊಡಗಿತು. ಈ ಸಂದರ್ಭ ಬಸ್ನ ಬಾಗಿಲ ಬಳಿ ವಿದ್ಯಾರ್ಥಿಗಳ ದೊಡ್ಡ ಗುಂಪೇ ಇತ್ತಾದರೂ, ಯಾರಿಗೂ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
Next Story