ಬ್ರಹ್ಮಾವರ: ಮಧುಮೇಹಿಗಳಿಗೆ ಉಚಿತ ಶಿಬಿರ
ಬ್ರಹ್ಮಾವರ, ನ.3: ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ, ವಿಶ್ವ ಮಧುಮೇಹ ಪ್ರತಿಷ್ಠಾನ, ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸಾಯನ್ಸ್ ಮಣಿಪಾಲ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಅಸಾಂಕ್ರಾಮಿಕ ರೋಗಗಳ ಆಯುಷ್ ವಿಭಾಗ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಮಧುಮೇಹಿಗಳಿಗಾಗಿ ಉಚಿತ ಪಾದದ ತಪಾಸಣೆ, ಕಣ್ಣಿನ ತಪಾಸಣೆ, ಬಾಯಿಯ ತಪಾಸಣೆಯನ್ನು ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು.
ಇದರೊಂದಿಗೆ ಪಾದದ ಆರೈಕೆ ಹಾಗು ಪಥ್ಯಾಹಾರದ ಕುರಿತು ಆಪ್ತ ಸಮಾಲೋಚನೆಯನ್ನು ನಡೆಸಲಾಯಿತು. ರಕ್ತದಲ್ಲಿನ ಕೊಬ್ಬಿನ ಪರೀಕ್ಷೆ, ಆ ಕ್ಷಣದ ರಕ್ತದ ಸಕ್ಕರೆ ಪ್ರಮಾಣ, ದೇಹದ ಸ್ಥೂಲತೆಯ ಉಲ್ಲೇಖ ಮುಂತಾದ ತಪಾಸಣೆ ನಡೆಸಲಾಯಿತು. ಸುಮಾರು 70 ಮಂದಿ ಮಧುಮೇಹಿಗಳು ಈ ಸೇವೆಯ ಲಾಭ ಪಡೆದರು. 31 ಮಧುಮೇಹಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಆಸ್ಪತ್ರೆ ಗಳಿಗೆ ನಿರ್ದೇಶಿಸಲಾಯಿತು. ಶಿ
ಬಿರದಲ್ಲಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ್ ಐತಾಳ್, ಮಣಿಪಾಲ ಫಿಸಿಯೋಥೆರಪಿ ವಿಭಾಗದ ಪ್ರಾಚಾರ್ಯ ಡಾ ಜಿ.ಅರುಣ್ ಮಯ್ಯ, ಅಸಾಂಕ್ರಾಮಿಕ ರೋಗಗಳ ಚಿಕಿತ್ಸಾಲಯ ಬ್ರಹ್ಮಾವರದ ವೈದ್ಯಾಧಿಕಾರಿ ಡಾ. ಎರಿಕ್, ದಂತ ಶಸ್ತ್ರಚಿಕಿತ್ಸಕಿ ಡಾ.ದೀಪಾ ಕಾಮತ್, ಆಯುಷ್ ವೈದ್ಯಾದಿಕಾರಿ ಡಾ.ಗಾಯತ್ರಿ ಮುಂತಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಆಯುರ್ವೇದ ದಿನದ ಕುರಿತು ಡಾ.ಗಾಯತ್ರಿ ಆಧುನಿಕ ವೈದ್ಯಕೀಯ ಪದ್ಧತಿಯೊಂದಿಗೆ ಆಯುರ್ವೇದದ ಸಮಾಯೋಗದ ಬಗ್ಗೆ ತಿಳಿಸಿದರು.