‘ಸುಸಂಸ್ಕೃತ ಜೀವನ ಕ್ರಮದಿಂದ ಶ್ರೇಯಸ್ಸು’
ಮಂಗಳೂರು, ನ.6: ಜನರಿಗೆ ಸಹಕಾರ, ಅವರ ಕಷ್ಟಗಳಿಗೆ ಸ್ಪಂದನೆ, ಸುಸಂಸ್ಕೃತ ಜೀವನ ಕ್ರಮದಿಂದ ಶ್ರೇಯಸ್ಸನ್ನು ಪಡೆಯಬಹುದು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಎನ್.ವಿನಯ ಹೆಗ್ಡೆ ಹೇಳಿದರು. ನಗರದ ರಾಮಕೃಷ್ಣ ಮಠದ ವತಿಯಿಂದ ನಡೆದ ಭಕ್ತ ಸಮಾಗಮ ‘ಭಾವ ಸಂಗಮ-2016’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೊಡಗು ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದ ಅಧ್ಯಕ್ಷ ಬೋಧ ಸ್ವರೂಪಾನಂದಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದ್ವಿಚಾರಗಳನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿದಾಗ ಬದುಕು ಸಾರ್ಥಕವಾಗಲಿದೆ ಎಂದರು.
ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ನಿತ್ಯಾನಂದಜಿ ಮಹರಾಜ್ ಮುಖ್ಯ ಅತಿಥಿಯಾಗಿದ್ದರು. ಮಂಗಳೂರು ರಾಮಕೃಷ್ಣಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ, ಬೇಲೂರು ಮಠದ ಬ್ರಹ್ಮಚಾರಿ ಪ್ರ.ಶಿಕ್ಷಣ ಕೇಂದ್ರದ ಆಚಾರ್ಯ ಸ್ವಾಮಿ ವೀರೇಶಾನಂದಜಿ, ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಯೋಗೀಶ್ವರಿ ಶಿವರಾಂ, ಗುರುಪಾದ ಬೆಳಗಾವಿ, ಎಚ್.ಆರ್. ಇಂದ್ರಾಳಿ, ವೇಣುಗೋಪಾಲ್ ಅರಸೀಕೆರೆ ಅನಿಸಿಕೆ ಹಂಚಿಕೊಂಡರು.
ರಾಮ್ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.