ಹಣಕ್ಕಾಗಿ ಮುಂದುವರಿದ ಗ್ರಾಹಕರ ಪರದಾಟ
ಮಂಗಳೂರು, ನ.14: ಕೇಂದ್ರ ಸರಕಾರವು 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಹಕರು ಅವುಗಳ ವಿನಿಮಯಕ್ಕೆ ಬ್ಯಾಂಕ್ಗಳಲ್ಲಿ ನೂಕು ನುಗ್ಗಲು ಮುಂದುವರಿಸಿದ್ದಾರೆ. ಈ ಮಧ್ಯೆ ಎಟಿಎಂಗಳಲ್ಲೂ ಕೂಡ ಗ್ರಾಹಕರು ರಾತ್ರಿವರೆಗೂ ಸರದಿ ಸಾಲಿ ನಲ್ಲಿ ನಿಂತಿದ್ದಾರೆ.
ಕೆಲವು ಬ್ಯಾಂಕ್-ಎಟಿಎಂಗಳಲ್ಲಿ ಎಂದಿನಂತೆ ಮಧ್ಯಾಹ್ನವಾಗುತ್ತಲೇ ‘ಹಣ’ ಖಾಲಿಯಾದ ಕಾರಣ ಗ್ರಾಹಕರು ‘ಹಣ’ಕ್ಕಾಗಿ ಪರದಾಡಿ ದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲೂ ಕೂಡ ಬ್ಯಾಂಕ್ ಶಾಖೆ, ಎಟಿಎಂ, ಅಂಚೆ ಕಚೇರಿಗಳಲ್ಲಿ ಕೂಡ ಈ ಸಮಸ್ಯೆ ಮುಂದುವರಿದಿದೆ. ‘ಚಿಲ್ಲರೆ’ಯ ಅಭಾವದಿಂದ ಜನಸಾಮಾನ್ಯರು ಯಾವುದೇ ವಸ್ತುಗಳನ್ನು ಖರೀದಿ ಸಲಾಗದೆ ಹತಾಶರಾಗಿದ್ದಾರೆ.
Next Story