ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ
ಸುಳ್ಯ, ನ.21: ಕೀಫ್ ಫಿಟ್ ಹೆಲ್ತ್ ಕ್ಲಬ್[ಕೆಎಚ್ಎಫ್ಸಿ] ಸುಳ್ಯ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಸುಳ್ಯದ ಅಮೃತ ಭವನ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ರಾತ್ರಿ 7:30 ಕ್ಕೆ ಸರಿಯಾಗಿ ಜರಗಿದ ಸಂಸ್ಥೆಯ 26ನೆ ವರ್ಷದ ವಾರ್ಷಿಕ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಆಯ್ದ ತಂಡಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನೆಯನ್ನು ಸುಳ್ಯದ ಹಿರಿಯ ಕ್ರೀಡಾಪಟು ನಿವೃತ್ತ ಉಪನ್ಯಾಸಕ ಮೋಂಟಡ್ಕ ರಾಮಚಂದ್ರ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಹಿಮಕರ ಗೌಡ ಬೀರಮಂಗಿಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯನ್.ಜಯಪ್ರಕಾಶ್ ರೈ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಪಂದ್ಯಾಟಕ್ಕೆ ಶುಭ ಹಾರೈಸಿದರು. ಜೂನಿಯರ್ ನ್ಯಾಶನಲ್ ರ್ಯಾಂಕಿಂಗ್ ಆಟಗಾರ ಸೂರ್ಯ ಹಾಗೂ ಸಂತೋಷ್ ಇವರ ತಂಡ ಪ್ರಥಮ ಸ್ಥಾನವನ್ನು ಗಳಿಸಿತು. ದ್ವಿತೀಯ ಸ್ಥಾನವನ್ನು ಮಂಗಳೂರಿನ ರೈಝ್ ಯೆನೆಪೊಯ ಹಾಗೂ ಸುಶ್ಮಿತ್ ಮಣಿಪಾಲ ಇವರು ಪಡೆದುಕೊಂಡರು. ತೃತೀಯ ಸ್ಥಾನವನ್ನು ಸುಳ್ಯದ ಮಹೇಶ್ ಜಯನಗರ ಹಾಗೂ ಉಡುಪಿಯ ಅಭಿಷೇಕ್ ಪಡೆದುಕೊಂಡರು. ಚತುರ್ಥ ಸ್ಥಾನವನ್ನು ರಾಜ್ಯ ರ್ಯಾಂಕಿಂಗ್ ಆಟಗಾರ ಅನಿರುದ್ಧ ಹಾಗೂ ಆದರ್ಶ ಬೆಂಗಳೂರು ಇವರ ತಂಡ ಗಳಿಸಿತು. ಪಂದ್ಯಾಟದ ಉತ್ತಮ ಆಟಗಾರನಾಗಿ ಮುನೀರ್ ಹಾಗೂ ಪೃಥ್ವಿರಾಜ್ ಚಿಕ್ಕಮಗಳೂರು ಇವರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. ರವಿವಾರ ಮುಂಜಾನೆ ನಡೆದ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆಯನ್ನು ಕ್ಲಬ್ ಕಾರ್ಯದರ್ಶಿ, ಜಿಲ್ಲಾ ವಕ್ಫ್ ಸದಸ್ಯ ಅಬ್ದುರ್ರಹ್ಮಾನ್ ಮೊಗರ್ಪಣೆ, ಉಪಾಧ್ಯಕ್ಷ ಅಶೋಕ ಸರಳಾಯ, ಕೋಶಾಧಿಕಾರಿ ರಮೇಶ್ ಭಟ್, ಪ್ರೊ. ಆ್ಯಂಟನಿ ಸಂಪಾಜೆ ನೆರವೇರಿಸಿದರು. ಕ್ಲಬ್ನ ಸದಸ್ಯರಾದ ವೀರಪ್ಪ ಗೌಡ, ನಾಗೇಶ್ ರೈ, ಗಣೇಶ ಆಳ್ವ, ಅಶೋಕ ಪ್ರಭು, ಸತೀಶ್ ಪಿ.ಕೆ. ಹಾಗೂ ಮಾಹಿನ್ ಕಮ್ಮಾಡಿ ಉಪಸ್ಥಿತರಿದ್ದರು. ಕ್ಲಬ್ ಸದಸ್ಯ ಮಹೇಶ್ ಬೀರಮಂಗಿಲ ಹಾಗೂ ಅಶೋಕ್ ಸರಳಾಯ ಕಾರ್ಯಕ್ರಮನಿರೂಪಿಸಿದರು.