ವಾಸುದೇವ ವಿಷ್ಣು ಭಟ್
ಉಡುಪಿ, ನ.29: ಬಡಗುತಿಟ್ಟು ಯಕ್ಷಗಾನದ ಹಿಮ್ಮೇಳ ವಾದಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಗುಂಡಿಬೈಲು ವಾಸುದೇವ ವಿಷ್ಣು ಭಟ್ ಅವರು ನ.27ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 75 ವರ್ಷ ಪ್ರಾಯವಾಗಿತ್ತು.
ವಾಸುದೇವ ಭಟ್ ಅವರು ಅಮೃತೇಶ್ವರೀ, ಹಾಲಾಡಿ, ಮಾರಣಕಟ್ಟೆ, ಕಮಲಶಿಲೆ, ಇಡಗುಂಜಿ, ಬಚ್ಚಗಾರು, ಸಾಲಿಗ್ರಾಮ, ಗುಂಡುಬಾಳ ಮೇಳ ಗಳಲ್ಲಿ ಆರು ದಶಕಗಳ ಕಲಾಸೇವೆ ಸಲ್ಲಿಸಿದ್ದರು. 2013ರಲ್ಲಿ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಪಡೆದಿದ್ದರು
.
Next Story