ಶಿರಿಯಾರ ಗ್ರಾಪಂಗೆ ನೋಟೀಸು ನೀಡಲು ಜಿಪಂ ನಿರ್ಣಯ
ಉಡುಪಿ, ನ.29: ತಾಲೂಕಿನ ಶಿರಿಯಾರ ಗ್ರಾಪಂನಲ್ಲಿ ಸಾಮಾನ್ಯ ಸಭೆಗಳು ನಿಗದಿಯಾದಂತೆ ನಡೆಯದೆ, ಗ್ರಾಪಂನ ಎಲ್ಲಾ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಇಡೀ ಗ್ರಾಪಂನ್ನು ಬರ್ಖಾಸ್ತು ಮಾಡುವಂತೆ ಉಡುಪಿ ತಾಪಂ ಸರ್ವಾನುಮತದ ಪ್ರಸ್ತಾವನೆಯ ಕುರಿತು ಇಂದು ನಡೆದ ಜಿಪಂನ ನಾಲ್ಕನೇ ಸಾಮಾನ್ಯ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಿ ಪಂಚಾಯತ್ರಾಜ್ ಅಧಿನಿಯಮದಂತೆ ಗ್ರಾಪಂಗೆ ಕಾಲಾವಕಾಶ ನೀಡಿ ನೋಟೀಸು ಜಾರಿಗೊಳಿಸಲು ನಿರ್ಧರಿಸಲಾಯಿತು.
ದಿವಾಕರ ಬಾಬು ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಗಿದ್ದು, ಈ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಅಧ್ಯಕ್ಷರು ಹಾಗೂ ಸದಸ್ಯರ ನಡುವಿನ ಸಮಸ್ಯೆಯಿಂದಾಗಿ ಗ್ರಾಮದ ಜನರು ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸದಸ್ಯರು ಗಮನ ಸೆಳೆದರು.
ಸಾಮಾನ್ಯ ಸಭೆಗಳು ನಿಗದಿಯಾದಂತೆ ನಡೆಯದ ಹಿನ್ನೆಲೆಯಲ್ಲಿ ಪಂಚಾಯತ್ನಿಂದ ನೀಡಬೇಕಾದ ಪರವಾನಿಗೆ, ನಿರಾಕ್ಷೇಪಣಾ ಪತ್ರ ಸೇರಿದಂತೆ ಸಾರ್ವಜನಿಕ ಸೇವೆಗಳನ್ನು ನೀಡಲಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ನಿವೇಶನವೂ ಸೇರಿದಂತೆ ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ನಡೆಯುತ್ತಿಲ್ಲ ಎಂದು ಸದಸ್ಯರು ಹೇಳಿದರು.
ಕುಡಿಯುವ ನೀರಿನ ಚರ್ಚೆ:
ಜಿಪಂನಲ್ಲಿ ಇಂದು ಕುಡಿಯುವ ನೀರಿನ ಯೋಜನೆ ಹಾಗೂ ಕಾಮಗಾರಿಯ ಅನುಷ್ಠಾನದ ಕುರಿತಂತೆ ಸುದೀರ್ಘ ಚರ್ಚೆ ನಡೆಯಿತು. ಸಭೆಯ ಪ್ರಾರಂಭದಲ್ಲೇ ಚರ್ಚೆ ಆರಂಭಿಸಿದ ಕಾಂಗ್ರೆಸ್ ಸದಸ್ಯ ಜನಾರ್ದನ ತೋನ್ಸೆ, ಈ ಬಾರಿ ಜನವರಿಯಲ್ಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಂಡುಬರುತ್ತಿದೆ. ತನ್ನ ಕಲ್ಯಾಣಪುರ ಕ್ಷೇತ್ರದಲ್ಲಿ ಈಗಲೇ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡುವ ಸ್ಥಿತಿ ಬಂದಿದೆ ಎಂದರು.
ಇಂಜಿನಿಯರ್ ಇಲಾಖೆಯ ಅಧಿಕಾರಿಗಳು ಸದಸ್ಯರಿಂದ 32 ಲಕ್ಷ ರೂ. ಕುಡಿಯುವ ನೀರಿನ ಯೋಜನೆಗೆ ಕ್ರಿಯಾಯೋಜನೆ ಪಡೆದಿದ್ದೀರಿ ಅದು ಏನಾಯಿತು. ನಮಗೆ ಜನ ಪ್ರಶ್ನಿಸುತಿದ್ದೀರಿ ಎಂದರು. ಅವರ ಮಾತಿಗೆ ಆಡಳಿತ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ನ ಹಲವು ಸದಸ್ಯರು ಧ್ವನಿಗೂಡಿಸಿದರು.
ಬಹುಕಾಲ ನಡೆದ ಈ ಚರ್ಚೆಯ ವೇಳೆ ಅಧಿಕಾರಿಗಳು ಬೇರೆ ಬೇರೆ ಸದಸ್ಯರಿಗೆ ವಿವಿಧ ಮಾಹಿತಿಗಳನ್ನು ನೀಡಿ ಗೊಂದಲ ಮೂಡಿಸುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸ್ಥಾಯಿ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ ಇಂಜಿನಿಯರ್ಗಳೇ ಕ್ರಿಯಾಯೋಜನೆ ತಯಾರಿಸುವ ಕುರಿತು ದಾಖಲೆಗಳೊಂದಿಗೆ ಬಹಿರಂಗಗೊಳಿಸಿದ್ದರಿಂದ ಚರ್ಚೆ ಇನ್ನಷ್ಟು ವಿಸ್ತಾರ ಗೊಂಡಿತು. ಬಹುಕಾಲ ನಡೆದ ಈ ಚರ್ಚೆಯ ವೇಳೆ ಅಧಿಕಾರಿಗಳು ಬೇರೆ ಬೇರೆ ಸದಸ್ಯರಿಗೆ ವಿವಿಧ ಮಾಹಿತಿಗಳನ್ನುನೀಡಿ ಗೊಂದಲಮೂಡಿಸುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇವೇಳೆಸ್ಥಾಯಿಸಮಿತಿಯಅ್ಯಕ್ಷ ಬಾಬು ಶೆಟ್ಟಿ ಇಂಜಿನಿಯರ್ಗಳೇ ಕ್ರಿಯಾಯೋಜನೆ ತಯಾರಿಸುವ ಕುರಿತು ದಾಖಲೆಗಳೊಂದಿಗೆ ಬಹಿರಂಗಗೊಳಿಸಿದ್ದರಿಂದ ಚರ್ಚೆ ಇನ್ನಷ್ಟು ವಿಸ್ತಾರ ಗೊಂಡಿತು.
ಈ ನಡುವೆ ಗೌರಿ ದೇವಾಡಿಗ ಅವರು ಕಾಂಗ್ರೆಸ್ ಸದಸ್ಯೆಯಾದ ತನಗೆ ಅಧ್ಯಕ್ಷರು ತಾರತಮ್ಯ ಮಾಡಿದ್ದಾರೆ. ಹಿಂದಿನ ಅಧ್ಯಕ್ಷರು ಈ ರೀತಿ ಮಾಡಿಲ್ಲ. ಕಾಂಗ್ರೆಸ್ ಸದಸ್ಯೆ ಎಂಬ ಕಾರಣಕ್ಕೆ ತನಗೆ ನಯಾಪೈಸೆ ಅನುದಾನ ನೀಡಿಲ್ಲ. ಅವರು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಮಾಡಿದ್ದಾರೆ ಎಂದು ಆರೋಪಿಸಿದರು.
ಹಿಂದೆ ಬಿಜೆಪಿಯಲ್ಲಿದ್ದ ತಾವು ಕಾಂಗ್ರೆಸ್ಗೆ ಹೋಗಿದ್ದು ತಪ್ಪು ಎಂದು ಬಾಬು ಶೆಟ್ಟಿ ಹೇಳಿದರೆ, ತನ್ನದು ಹೋಗಲಿ ಕಾಂಗ್ರೆಸ್ನ ಉಳಿದ 5 ಮಂದಿ ಏನು ತಪ್ಪು ಮಾಡಿದ್ದಾರೆ ಎಂದು ಗೌರಿ ತಿರುಗೇಟು ನೀಡಿದರು. ಚರ್ಚೆಯಲ್ಲಿ ಪ್ರತಾಪ್ ಹೆಗ್ಡೆ ಮಾರಾಳಿ, ರಾಘವೇಂದ್ರ ಗಾಣಿಗ ಮುಂತಾದವರು ಪಾಲ್ಗೊಂಡರು.
ಕಿಂಡಿ ಅಣೆಕಟ್ಟಿನ ನಿರ್ವಹಣೆ ಕುರಿತಂತೆ ಪ್ರತಾಪ್ ಹೆಗ್ಡೆ ಮಾರಾಳಿ ಪ್ರಶ್ನೆ ಎತ್ತಿದರು. ಸಣ್ಣ ನೀರಾವರಿ ಇಲಾಖೆಯ ಮೂಲಕ ನಿರ್ಮಿಸವು ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಕುರಿತು ಸದಸ್ಯರು ಮತ್ತೊಮ್ಮೆ ಚರ್ಚಿಸಿದರು. ಇಲಾಖೆ ಅಣೆಕಟ್ಟನ್ನು ಗ್ರಾಪಂಗಳಿಗೆ ಬಿಟ್ಟುಕೊಟ್ಟ ಬಳಿಕ ಅವುಗಳ ನಿರ್ವಹಣೆಗೆ ಯಾವುದೇ ಅನುದಾನ ಗ್ರಾಪಂಗೆ ನೀಡುತ್ತಿಲ್ಲ ಎಂದು ದೂರಿದರು. ಇದರಿಂದ ಸಕಾಲದಲ್ಲಿ ಹಲಗೆ ಹಾಕಲು ಸಾಧ್ಯವಾಗುತ್ತಿಲ್ಲ ಎಂದರು.
ನರೇಗಾದಲ್ಲಿ ಇದನ್ನು ನಡೆಸಲು ಪ್ರಯತ್ನಿಸಬಹುದು ಎಂದು ಅವರು ಹೇಳಿದಾಗ, ನರೇಗಾದ ಅಡಿಯಲ್ಲಿ ನಿರ್ಮಾಣಗೊಂಡ ಕಿಂಡಿಅಣೆಕಟ್ಟುಗಳ ನಿರ್ವಹಣೆಯನ್ನು ಮಾತ್ರ ಅದರಲ್ಲಿ ಮಾಡಲು ಸಾಧ್ಯ ಎಂದು ಸಿಇಓ ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಶಶಿಕಾಂತ ಪಡುಬಿದ್ರಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.