ಡಾ. ವಿಶ್ವನಾಥ ನಾಯಕ್ ರವರಿಗೆ ಶಾಂತಿ ಸಂಸ್ಥೆಯಿಂದ ರಾಷ್ಟ್ರೀಯ ಗೌರವ ಪುರಸ್ಕಾರ
ವಿಟ್ಲ, ಡಿ.1: ಪಾಣೆಮಂಗಳೂರಿನ ವೈದ್ಯ ಡಾ.ಪಿ.ವಿಶ್ವನಾಥ ನಾಯಕ್ ಅವರ ವೈದ್ಯಕೀಯ ಸೇವೆಯನ್ನು ಗುರುತಿಸಿ ಹೊಸದಿಲ್ಲಿಯ ಪ್ರಜಾ ಭಾವೈಕ್ಯ ಶಾಂತಿ ಸಂಸ್ಥೆಯು ರಾಷ್ಟ್ರೀಯ ಗೌರವ ಪುರಸ್ಕಾರ ನೀಡಿ ಪುರಸ್ಕರಿಸಿದೆ.
ಹೊಸದಿಲ್ಲಿಯ ಅಂತಾರಾಷ್ಟ್ರೀಯ ಅಪೆಕ್ಸ್ ಇಂಡಿಯಾ ಕೇಂದ್ರದಲ್ಲಿ ಮಾಜಿ ರಾಷ್ಟ್ರಪತಿ, ಭಾರತ ರತ್ನ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಜೀವನ ಮತ್ತು ಸಾಧನ ಚಿಂತನ ಸಮಾವೇಶದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇವರಿಗೆ ತಾಲೂಕು ಸಾಹಿತ್ಯ ಪರಿಷತ್ ಗೌರವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ರಾಜ್ಯಮಟ್ಟದ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ.
Next Story