ಬಾವಿಯಲ್ಲಿ ಸಾಕು ಪ್ರಾಣಿಗಳ ಮೃತದೇಹ ಪತ್ತೆ: ದೂರು
ಕಾಸರಗೊಡು, ಡಿ.14: ಬೆಕ್ಕು ಮತ್ತು ನಾಯಿಗಳನ್ನು ಕೊಂದು ಬಾವಿಗೆಸೆದ ಘಟನೆ ಪುಲ್ಲೂರು ಪೆರಿಯದಲ್ಲಿ ನಡೆದಿದೆ
ಪುಲ್ಲೂರು ಪೆರಿಯ ಸರಕಾರಿ ಯು.ಪಿ. ಶಾಲೆಯ ಬಾವಿಯಲ್ಲಿ ಸತ್ತ ಬೆಕ್ಕುಗಳು ಮತ್ತು ಸಮೀಪದ ಉದಯನಗರ ಸರಕಾರಿ ಹೈಸ್ಕೂಲ್ ಬಾವಿಯಲ್ಲಿ ನಾಯಿಗಳು ಪತ್ತೆಯಾಗಿದೆ. ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ಬುಧವಾರ ಬೆಳಗ್ಗೆ ಶಾಲಾ ಸಿಬ್ಬಂದಿ ಮಧ್ಯಾಹ್ನದ ಊಟಕ್ಕಾಗಿ ಬಾವಿಯಿಂದ ನೀರು ಕೊಂಡೊಯ್ಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಅಂಬಲತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story