ಅಬ್ದುಲ್ ಖಾದರ್
ಬಂಟ್ವಾಳ, ಜ. 15: ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ನಿವೃತ್ತ ಯೋಧ ಅಬ್ದುಲ್ ಖಾದರ್ ಯಾನೆ ಮಿಲಿಟ್ರಿ ಖಾದ್ರಿಯಾಕ(77) ಅವರು ರವಿವಾರ ಮುಂಜಾನೆ ಸ್ವ ಗೃಹದಲ್ಲಿ ಹೃದಯಾಘಾತದಿಂದ ಮೃತರಾಗಿದ್ದಾರೆ.
ಮೃತರು 1961ರಲ್ಲಿ ಭಾರತೀಯ ಸೇನೆಗೆ ಸೇರಿದ್ದ ಅವರು ಇಂಡೋ - ಟಿಬೆಟ್ ಯುದ್ಧದ ಸಮಯದಲ್ಲಿ ಸೇನೆಯಲ್ಲಿ ಬ್ರಿಗೇಡಿಯರ್ ಆಗಿ ಸೇವೆ ಸಲ್ಲಿಸಿದ್ದರು.
ನಿವೃತ್ತ ಹೆಡ್ ಕಾನ್ಸ್ಟೇಬಲ್ ನೆಹರೂ ನಗರ ನಿವಾಸಿ ಕೆ.ಅಬ್ದುಲ್ ಹಮೀದ್ ಅವರ ಸಹೋದರರಾಗಿರುವ ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story