ಸೈಯದ್ ದಾದಾಪೀರ್
ಮಂಗಳೂರು, ಜ.21: ಕೃಷ್ಣಾಪುರ ಚಕ್ರವರ್ತಿ ಮೈದಾನ ಬಳಿಯ ನಿವಾಸಿ ಸೈಯದ್ ದಾದಾಪೀರ್ (55) ಇಂದು ಬೆಳಗ್ಗಿನ ಜಾವ ನಿಧನಹೊಂದಿದರು.
ಸುಮಾರು 30 ವರ್ಷಗಳ ಕಾಲ ಸರಕಾರಿ ಉದ್ಯೋಗದಲ್ಲಿದ್ದ ಅವರು ರಾಯಚೂರಿನಲ್ಲಿ ಕೆಪಿಸಿಎಲ್ನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆ ಅನಾರೋಗ್ಯಕ್ಕೊಳಗಾದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗಿನ ಜಾವ ಮೃತಪಟ್ಟರೆಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಅಂತ್ಯ ಕ್ರಿಯೆಯು ಚೊಕ್ಕಬೆಟ್ಟು ಮೊದಿನ್ ಜುಮಾ ಮಸೀದಿಯಲ್ಲಿ ನೆರವೇರಿತು.
Next Story