ಶ್ರೀನಿವಾಸ ಮೊಗೆರಾಯ
ಮೂಡುಬಿದಿರೆ, ೆ.4: ಇಲ್ಲಿನ ಪಡುಕೊಣಾಜೆಯ ನಾಗಬ್ರಹ್ಮ ದೇವಸ್ಥಾನದ ಪ್ರಧಾನ ಅರ್ಚಕ ಶತಾಯುಷಿ ವೇ.ಮೂ. ಶ್ರೀನಿವಾಸ ಮೊಗೆರಾಯ ತಮ್ಮ ನಿವಾಸ ಪದ್ಮಶ್ರೀ ನಿಲಯದಲ್ಲಿ ಶುಕ್ರವಾರ ನಿಧನ ಹೊಂದಿದರು. ಅವರು ಮೂಡುಬಿದಿರೆಯ ಜಯಶ್ರೀ ಹೊಟೇಲ್ನ ಸ್ಥಾಪಕ ಮಾಲಕರಾಗಿದ್ದ ಕೃಷ್ಣ ಮೊಗೆರಾಯ ಸಹಿತ ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಮೂರೂವರೆ ದಶಕಗಳ ಕಾಲ ದೇವಸ್ಥಾನದ ಅರ್ಚಕರಾಗಿದ್ದ ಅವರು ವೇದ ಪಾಠಗಳನ್ನು ನಡೆಸುತ್ತಿದ್ದು ಅನೇಕ ಶಿಷ್ಯರನ್ನೂ ಹೊಂದಿದ್ದಾರೆ.
Next Story