ಬಾಲರಾಜ್
ಉಪ್ಪಿನಂಗಡಿ, ೆ.21: ಪಿಡಬ್ಲ್ಯುಡಿ 1ನೆ ದರ್ಜೆ ಗುತ್ತಿಗೆದಾರ, ಪವಿತ್ರಾ ಕನ್ಸ್ಟ್ರಕ್ಷನ್ ಮಾಲಕ, ಮಂಗಳೂರು ಅತ್ತಾವರ ನಿವಾಸಿ ಗೋವಿಂದಸ್ವಾಮಿ ಬಾಲರಾಜ್(63) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದ್ದಾರೆ.
ಕಳೆದ 40 ವರ್ಷಗಳಿಂದ ಪಿಡಬ್ಲುಡಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿರುವ ಬಾಲರಾಜ್ ತಮಿಳುನಾಡು ತ್ರಿಪುರ ಮೂಲದವರು. ಇವರು ತನ್ನ ತಾಯಿಯೊಂದಿಗೆ ಮಂಗಳೂರಿಗೆ ಬಂದು ರಸ್ತೆ ಡಾಂಬರೀಕರಣ ಕೆಲಸಗಳಲ್ಲಿ ಕೂಲಿ ಆಳುವಾಗಿ ಕೆಲಸ ಮಾಡಿ, ಅತ್ಯಂತ ಶ್ರಮವಹಿಸಿ ಉನ್ನತ ಪದವಿಗೇರಿದ್ದರು. ಬಾಲರಾಜ್ ಜನಪರ, ಸಾಮಾಜಿಕ ಕಳಕಳಿಯ ಸೇವೆಗಳಿಗೆ ಸಹಾಯ ಹಸ್ತ ನೀಡಿ ಕೊಡುಗೈದಾನಿಯಾಗಿಯೂ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನ್ನು ಅಗಲಿದ್ದಾರೆ.
Next Story