ರುದ್ರಯ್ಯ ಆಚಾರ್ಯ
ಮೂಡುಬಿದಿರೆ, ಮೇ 2: ಮಾರೂರು ಗ್ರಾಮದ ಹಿತ್ತಿಲು ಮನೆಯ ನಿವಾಸಿ, ಹಿರಿಯ ಕಾಷ್ಠಶಿಲ್ಪಿ ರುದ್ರಯ್ಯ ಆಚಾರ್ಯ (70) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.
ಇವರು ಊರು-ಪರವೂರುಗಳ ಹಲವಾರು ದೈವಸ್ಥಾನಗಳ ಧ್ವಜಸ್ತಂದ ರಚನೆ, ದೈವಗಳ ಮಂಚಗಳು ಹಾಗೂ ದೈವಸ್ಥಾನದ ಮೇಲ್ಛಾವಣಿಯ ಕಾಷ್ಠ ಶಿಲ್ಪದ ಕೆಲಸಗಳನ್ನು ಮಾಡಿ ಜನಾನುರಾಗಿಯಾಗಿದ್ದರು. ಹಲವಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದರು.
Next Story