ಶ್ರೀನಿವಾಸನ್
ಮಂಗಳೂರು,ಜೂ.18: ಬಿಜೈ-ಕಾಪಿಕಾಡ್ ನಿವಾಸಿ, ಹಿರಿಯ ನಿವೃತ್ತ ಪವನಶಾಸ್ತ್ರಜ್ಞ ಜಿ. ಶ್ರೀನಿವಾಸನ್ (78) ಸೋಮವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
ಸ್ವಲ್ಪಸಮಯದಿಂದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಅವರು ಪತ್ನಿ ರುಕ್ಮಿಣಿ, ಪತ್ರಕರ್ತ ನಂದಗೋಪಾಲ್ ಸಹಿತ ಇಬ್ಬರು ಪುತ್ರರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಜಿ.ಶ್ರೀನಿವಾಸನ್ ಲಕ್ಷದ್ವೀಪ ಮತ್ತು ಕೊಲ್ಕತ್ತಾ ಸೇರಿದಂತೆ ದೇಶಾದ್ಯಂತ ಮೂರು ದಶಕಗಳಿಂದ ಭಾರತೀಯ ಮೆಟರೊಲಾಜಿಕಲ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.
ರೊಟೇರಿಯನ್ ಆಗಿದ್ದ ಶ್ರೀನಿವಾಸನ್ ಐದು ದಶಕಕ್ಕೂ ಹೆಚ್ಚು ಕಾಲ ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ಮಿಕ ವಲಯಗಳಲ್ಲಿ ಸಕ್ರಿಯರಾಗಿದ್ದರು. ಪ್ರತಿಭಾನ್ವಿತ ರಂಗಕಲೆ ಕಲಾವಿದರಾಗಿದ್ದ ಅವರು 60ರ ದಶಕದಲ್ಲಿ ಮುಂಬೈ ಮತ್ತು ಬೆಂಗಳೂರಿಲ್ಲಿ ಕನ್ನಡ ಕಲಾ ಕೇಂದ್ರವನ್ನು ಸ್ಥಾಪಿಸಲು ಶ್ರಮಿಸಿದ್ದರು
Next Story