ಮಂಗಳೂರು, ಜೂ.20: ಕದ್ರಿ ವ್ಯಾಸನಗರ ನಿವಾಸಿ ಹರೀಶ್ ಆಚಾರ್ಯ (57) ಹೃದಯಾಘಾತದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಲತಃ ಮಡಂತ್ಯಾರ್ನ ಹರೀಶ್ ಆಚಾರ್ಯ ಕಳೆದ ಅನೇಕ ದಶಕಗಳಿಂದ ಮಂಗಳೂರಿನಲ್ಲಿ ಚಿನ್ನದ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.