ಉಡುಪಿ, ಜು.1: ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಉದ್ಯೋಗಿ, ಕುಂಜಿಬೆಟ್ಟು ನಿವಾಸಿ ಶ್ರೀಧರ ಗಾಣಿಗ (68) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃದು ಮಾತಿನ, ಸರಳ ಸಜ್ಜನರಾಗಿ ಜನಾನುರಾಗಿಯಾಗಿದ್ದ ಇವರು, ಕೊಡುಗೈ ದಾನಿಯೂ ಆಗಿದ್ದರು. ಇವರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.