ಸುಲೈಮಾನ್ ಹಾಜಿ ಕಳತ್ತೂರು
ಕಾಪು, ಜು.14: ಬೆಳಪುವಿನ ಬದ್ರ್ ಜಾಮಿಯ ಮಸೀದಿ ಅಧ್ಯಕ್ಷ, ಕಾಪು ಸಮೀಪದ ಕಳತ್ತೂರು ನಿವಾಸಿ ಸುಲೈಮಾನ್ ಹಾಜಿ (59) ಗುರುವಾರ ತಡರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಸುಲೈಮಾನ್ ಸರಳ ಸಜ್ಜನ ವ್ಯಕ್ತಿತ್ವದವರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅವರ ಅಂತ್ಯ ಸಂಸ್ಕಾರವು ಬೆಳಪುವಿನ ಬದ್ರ್ ಜಾಮಿಯ ಮಸೀದಿ ವಠಾರದಲ್ಲಿ ಶುಕ್ರವಾರ ಪೂರ್ವಾಹ್ನ 11 ಗಂಟೆ ಸುಮಾರಿಗೆ ನೆರವೇರಿತು.
Next Story