ಅಚ್ಯುತ ಆಚಾರ್ಯ
ಮೂಡುಬಿದಿರೆ, ಜು. 19: ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ಗ್ಯಾರೇಜು ಅಚ್ಯುತ ಆಚಾರ್ಯ (97) ಮಂಗಳವಾರ ಮೂಡುಬಿದಿರೆ ಅರಮನೆ ಬಾಗಿಲಿನ ಸ್ವಗೃಹದಲ್ಲಿ ನಿಧನರಾದರು.
ಮೂಡುಬಿದಿರೆಯಲ್ಲಿ ಪ್ರಪ್ರಥಮವಾಗಿ ಎಂ ಆ್ಯಂಡ್ ಎಸ್ ಎಂಬ ಗ್ಯಾರೇಜನ್ನು ಸ್ಥಾಪಿಸಿ ಮುನ್ನಡೆಸಿದ್ದರು. ಅವರ ಬಳಿ ಹಲವಾರು ಮಂದಿ ತರಬೇತಿ ಪಡೆದು ಮೆಕ್ಯಾನಿಕ್ಗಳಾಗಿ ಸ್ವಂತ ಗ್ಯಾರೇಜು ಸ್ಥಾಪಿಸಿದ್ದರು. ಕಾರ್ ಮೆಕ್ಯಾನಿಕ್ನಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದರು. ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story