ಗೋಪಾಲ ಕಾರೆಕ್ಕಾಡು
ಪುತ್ತೂರು, ಸೆ. 3: ತಾಲೂಕಿನ ದಲಿತ ಚಳುವಳಿಯ ನಾಯಕ ಪುತ್ತೂರಿನ ನೆಹರೂ ನಗರ ಕಾರೆಕ್ಕಾಡು ನಿವಾಸಿ ದಿ. ಕುಂಜಿರ ಅವರ ಪುತ್ರ ಗೋಪಾಲ ಕಾರೆಕ್ಕಾಡು (48) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ)ಯಲ್ಲಿ ಸಕ್ರಿಯರಾಗಿದ್ದ ಗೋಪಾಲ ಕಾರೆಕ್ಕಾಡು ಅವರು ಪುತ್ತೂರಿನಲ್ಲಿ ಸಮಿತಿ ಸ್ಥಾಪನೆಗೆ ಕಾರಣಕರ್ತರಾಗಿದ್ದರು. ಬಹುಜನ ಸಮಾಜ ಪಕ್ಷವನ್ನು ಸಂಘಟಿಸುವಲ್ಲಿಯೂ ಮುಂಚೂಣಿಯಲ್ಲಿದ್ದ ಅವರು ಪ್ರಸ್ತುತ ತಾಲೂಕು ಖಜಾಂಜಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮೃತರ ಅಂತಿಮಕ್ರಿಯೆ ನಗರದ ಮಡಿವಾಳ ಕಟ್ಟೆ ಸಾರ್ವಜನಿಕ ಸ್ಮಶಾನದಲ್ಲಿ ರವಿವಾರ ಸಂಜೆ ನಡೆಸಲಾಯಿತು ಎಂದು ಕುಟುಂಬದ ಮೂಲ ತಿಳಿಸಿದೆ.
Next Story