ಕುಂಟಾಡಿ ಭುಜಂಗ ಆಚಾರ್ಯ
ಕಾರ್ಕಳ, ಸೆ.8: ತಾಲೂಕಿನ ಕುಂಟಾಡಿ ಗ್ರಾಮ ನಿವಾಸಿ ಭುಜಂಗ ಆಚಾರ್ಯ (82) ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಗ್ರಾಮ ಮೊಕ್ತೇಸರರಾಗಿ 35 ವರ್ಷಗಳ ಕಾಲ ಸೇವೆಗೈದಿದ್ದ ಭುಜಂಗ ಆಚಾರ್ಯರು ವೃತ್ತಿಯಲ್ಲಿ ಚಿನ್ನದ ನಕಾಶೆ ಕೆಲಸಗಾರ ರಾಗಿದ್ದರು. ಅನೇಕ ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ಖಡ್ಸಲೆ ಇತ್ಯಾದಿ ಕೌಶಲಪೂರ್ವವಾದ ಕೃತಿಗಳನ್ನು ನಿರ್ಮಿಸಿಕೊಟ್ಟಿದ್ದರು.
Next Story