ಅಶೋಕ್ ಕುಲಾಲ್
ಪುತ್ತೂರು, ಸೆ. 22: ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಸಮೀಪದ ಉಡ್ಡಂಗಳ ನಿವಾಸಿಯಾಗಿದ್ದ ಜತ್ತಪ್ಪ ಮೂಲ್ಯ ಅವರ ಪುತ್ರ ಅಶೋಕ್ ಕುಲಾಲ್ (36) ಅನಾರೋಗ್ಯದಿಂದಾಗಿ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಿತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ, ಕೇಸರಿ ಮಿತ್ರವೃಂದದ ಸಕ್ರೀಯ ಸದಸ್ಯರೂ ಆಗಿದ್ದ ಅವರು ಸಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದರು.
ಮೃತರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿ, ಸಹೋದರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
Next Story