ಶಕುಂತಲಾ ಶಂಕರ ಭಟ್ಟ
ಭಟ್ಕಳ, ಸೆ. 27: ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ ರ ತಾಯಿ ಉಪ್ರಳ್ಳಿ ಶಕುಂತಲಾ ಶಂಕರ ಭಟ್ಟ (85) ಅಲ್ಪ ಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹ ಕುಂದಾಪುರ ತಾಲೂಕಿನ ಉಪ್ರಳ್ಳಿಯಲ್ಲಿ ನಿದನರಾದರು.
ಸರಳ ಹಾಗೂ ಸಜ್ಜನಿಕೆಯಿಂದ ತಮ್ಮ ಗ್ರಾಮದ ಜನತೆಗೆ ಪರಿಚಿತರಾಗಿದ್ದರು. ಮೃತರು ರಾಧಾಕೃಷ್ಣ ಭಟ್ಟ, ಸೇರಿದಂತೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story