ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ
ಶ್ರೀರಾಮನ ಕುರಿತು ಮಹಾಕವಿ ಅಲ್ಲಮಾ ಇಕ್ಬಾಲ್ ಬರೆದ ಉರ್ದು ಕವಿತೆಯ ಕನ್ನಡ ಸಾರ
ರಾಮ್
ಲಬ್ರೇಝ್ ಹಯ್ ಶರಾಬೆ ಹಕೀಕತ್ ಸೆ ಜಾಮೆ ಹಿಂದ್ ಸಬ್ ಫಲ್ಸಫೀ ಹೈಂ ಖಿತ್ತ ಎ ಮಗ್ರಿಬ್ ಕೆ ರಾಮೆ ಹಿಂದ್
ಸತ್ಯ ತುಂಬಿ ತುಳುಕುತ್ತಿದೆ ಭಾರತದ ಮಧುಪಾತ್ರೆಯಲ್ಲಿ ಪಶ್ಚಿಮದ ಜ್ಞಾನಿಗಳೆಲ್ಲ ತಲೆದೂಗಿರುವರು ಭಾರತದ ಮಹಿಮೆಗೆ
-----------
ಏ ಹಿಂದಿಯೊಂಕೆ ಫಿಕ್ರೆ ಫಲಕ್ ರಸ್ ಕಾ ಹೈ ಅಸರ್ ರಫ್ ಅತ್ ಮೇ ಆಸ್ಮಾನ್ ಸೆ ಭೀ ಊಂಚಾ ಹೈ ಬಾಮೆ ಹಿಂದ್
ಭಾರತೀಯರ ಉನ್ನತ ವಿಚಾರಗಳ ಫಲವಿದು ತನ್ನ ಮಹಿಮೆಯಲಿ ಈ ದೇಶ ಬಾನಿನ ಎತ್ತರವನ್ನು ಮೀರಿದೆ
-----------
ಇಸ್ ದೇಸ್ ಮೇ ಹುವೆ ಹೈಂ ಹಝಾರೊಂ ಮಲಕ್ ಸರಿಶ್ತ್ ಮಶ್ಹೂರ್ ಜಿನ್ ಕೆ ದಂ ಸೆ ಹಯ್ ದುನಿಯಾ ಮೇ ನಾಮೆ ಹಿಂದ್
ಸಾವಿರಾರು ದಿವ್ಯ ವ್ಯಕ್ತಿಗಳು ಗತಿಸಿರುವರು ಈ ದೇಶದಲ್ಲಿ ಅವರಿಂದಲೇ ಇಂದು ಜಗದಲಿ ಎಲ್ಲೆಡೆ ಭಾರತದ ಹೆಸರಿದೆ
-----------
ಹೈ ರಾಮ್ ಕೇ ವುಜೂದ್ ಪೆ ಹಿಂದೂಸ್ತಾನ್ ಕೋ ನಾಜ್ ಅಹ್ಲೇ ನಝರ್ ಸಮಜ್ತೇ ಹೈಂ ಉಸ್ಕೊ ಇಮಾಮ್ ಎ ಹಿಂದ್
ರಾಮನ ವ್ಯಕ್ತಿತ್ವವೆಂದರೆ ಅಭಿಮಾನವಿದೆ ಭಾರತಕ್ಕೆ ಅವನೇ ನಮ್ಮ ನಾಯಕ ಎಂದು ಭಾರತದ ಜಾಣರು ಅನ್ನುತ್ತಾರೆ
-----------
ಎಜಾಝ್ ಉಸ್ ಚಿರಾಘೆ ಹಿದಾಯತ್ ಕಾ ಹಯ್ ಎಹೀ ರೋಷನ್ ತರ್ ಅಝ್ ಸಹರ್ ಹಯ್ ಝಮಾನೇ ಮೇ ಶಾಮ್ ಎ ಹಿಂದ್
ದಾರಿ ತೋರುವ ಆ ದೀಪದ ಮಹಿಮೆ ಇದು ಭಾರತದ ಇರುಳು ಜಗದ ಪಾಲಿಗೆ ಹಗಲಿಗಿಂತ ಉಜ್ವಲವಾಗಿದೆ
-----------
ತಲ್ವಾರ್ ಕಾ ಧನೀ ಥಾ ಶುಜಾಅತ್ ಮೇ ಫರ್ದ್ ಥಾ ಪಾಕೀಜ್ ಗೀ ಮೆ, ಜೋಶೆ ಮೊಹಬ್ಬತ್ ಮೇ ಫರ್ದ್ ಥಾ.
ಖಡ್ಗದ ಪ್ರವೀಣನವನು, ಶೌರ್ಯದಲ್ಲಿ ಅನುಪಮನು, ಪಾವಿತ್ರದಲ್ಲಿ, ಪ್ರೀತಿಯ ಆವೇಶದಲ್ಲಿ ಅನನ್ಯ ಅವನ ಹಿರಿಮೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ