ಅಬ್ದುಲ್ ಖಾದರ್
ಮಂಗಳೂರು, ನ.15: ಕುಂದಾಪುರ ಸಮೀಪದ ಕೋಟ ಪಡುಕೆರೆ ನಿವಾಸಿ ಅಬ್ದುಲ್ ಖಾದರ್ (60) ಸೋಮವಾರ ದಮ್ಮಾಮ್ನಲ್ಲಿ ನಿಧನರಾಗಿದ್ದಾರೆ.
ಕಳೆದ ಹಲವು ವರ್ಷದಿಂದ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಮೃತದೇಹವು ಶನಿವಾರ ಹುಟ್ಟೂರು ತಲುಪಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರು ಪತ್ನಿ ಹಾಗು ಓರ್ವ ಪುತ್ರ ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story