ಉಡುಪಿ, ಡಿ.16: ಕುಂಜೂರು ಮೂಡುಮನೆ ದಿ.ಲಕ್ಷ್ಮೀನಾರಾಯಣ ಉಡುಪರ ಪತ್ನಿ ಪ್ರಸ್ತುತ ಕೊಡವೂರು ಗ್ರಾಮದ ತೆಂಕನಿಡಿಯೂರು ನಿವಾಸಿ ಸತ್ಯಭಾಮ ಉಡುಪ (84) ಇಂದು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಸತ್ಯಭಾಮ ಅವರು ಛಾಯಾಗ್ರಾಹಕ-ಪತ್ರಕರ್ತ ಜನಾರ್ದನ ಕೊಡವೂರು ಸೇರಿದಂತೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.